ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲಿಸಿದರೆ ಗ್ರಾಮದಲ್ಲಿರುವ ಅಕ್ರಮಗಳನ್ನು ಬಯಲಿಗೆ ಎಳೆಯುತ್ತೇನೆ. ನೀವು ಗೆಲ್ಲಿಸಿದರೆ ಗ್ರಾಮದ ದೇವಸ್ಥಾನ, ಸ್ಮಶಾನ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿನೆ ಎನ್ನುವ ಮಹಿಳಾ ಅಭ್ಯರ್ಥಿಯೊಬ್ಬರ ಕರಪತ್ರ ಒಂದು ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದೆ.
ಯಾವತ್ತೂ ಇಂತಹ ಪ್ರಚಾರದ ಕರಪತ್ರಗಳನ್ನು ನೋಡಿರಲು ಸಾದ್ಯವಿಲ್ಲ ಬಿಡಿ. ಇಲ್ಲಿ ಸರಿ ತಪ್ಪುಗಳ ಲೆಕ್ಕಾಚಾರದ ಅವಶ್ಯಕತೆಯನ್ನು ನೋಡುವ ಹಾಗಿಲ್ಲ. ಗೆಲುವಿಗೆ ಏನೂ ಬೇಕೋ ಅದನ್ನು ಮಾಡುವುದಷ್ಟೇ ಮುಖ್ಯ. ಹಾಗೇ ಸಿದ್ಧವಾಗಿದೆ ಈ ಪ್ರಚಾರದ ಕರಪತ್ರ.
ತುಮಕೂರು ಜಿಲ್ಲೆಯ ಹೆಬ್ಬೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕಲ್ಕೆರೆ ಗ್ರಾಮದ ಎಚ್ ಗಂಗಮ್ಮ , ವಿಶಿಷ್ಟವಾದ ಕರಪತ್ರವನ್ನ ಸಿದ್ಧಪಡಿಸಿದ್ದಾರೆ. ಗೆದ್ದರೇ ಮಾಡುವ ಕೆಲಸಗಳೇನು ? ಸೋತರೇ ಮಾಡುವ ಕೆಲಸಗಳ ಪಟ್ಟಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಸೋತರೆ ಏನು ಮಾಡುತ್ತೇನೆ?:
ಇದು ಅಪರೂಪದ ಕರಪತ್ರ ನಿಜ. ಶಿಕ್ಷಣ ಸಚಿವ ಸುರೇಶಕುಮಾರ ಅವರೂ ಇಷ್ಟಪಟ್ಟು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟಿನಲ್ಲಿ ಶೇರ್ ಮಾಡಿದ್ದಾರೆ.
ಆದರೆ ಪಂಚಾಯತಿ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದರೆ ಕೆಲವು ಜನರು ಮಾಡಿರುವ ಅಕ್ರಮಗಳನ್ನು ಬಯಲಿಗೆ ಎಳೆದು ಹೊರಗೆ ತರುತ್ತಾರೆ . ಗೆದ್ದರೆ ಎಲ್ಲಾ ಅಕ್ರಮಗಳು ಸಕ್ರಮವಾಗುತ್ತವೆ ಹೇಗೆ ? ಏನೋ ವಿಭಿನ್ನ ವಾಗಿ ಮಾಡಲು ಹೋಗಿ ಗಂಗಮ್ಮ ತಗಲು ಹಾಕಿಕೊಂಡಿದ್ದಾರೆ. ಏಕೆಂದರೆ ಮತದಾರರು ದಡ್ಡರಲ್ಲ!
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment