February 22, 2026

Newsnap Kannada

The World at your finger tips!

gtd

ಜೆಡಿಎಸ್ ನಿಂದ ನಮ್ಮನ್ನು ಉಚ್ಚಾಟನೆ ಮಾಡಿದರೆ ಸ್ವಾಗತ ಮಾಡುವೆ – ಜಿಟಿಡಿ

Spread the love

ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದಾಗಿ ಹೇಳಿದ್ದಾರೆ. ಈ ಕಾರ್ಯವನ್ನು ನಾನು ಪ್ರೀತಿಯಿಂದ ಸ್ವಾಗತ ಮಾಡುವೆ ಎಂದು ಶಾಸಕ ಜಿ. ಟಿ. ದೇವೇಗೌಡರು ಹೇಳಿದರು.

ಪಕ್ಷ ಶುದ್ಧಿ ಮಾಡುವ ಕಾರ್ಯವನ್ನು ಮೈಸೂರಿನಿಂದಲೇ ಆರಂಭ ಮಾಡಲಿ ಎಂದು ಜೆಡಿಎಸ್ ವರಿಷ್ಠರಿಗೆ ಶಾಸಕ ದೇವೇಗೌಡರಿಗೆ ಸಲಹೆ ನೀಡಿದರು.

ಜೆಡಿಎಸ್ ನಲ್ಲಿ ಶಿಸ್ತಿನ ಕಾರ್ಯಕರ್ತ ನಾಗಿದ್ದೇನೆ. ಜೆಡಿಎಸ್‌ನಲ್ಲಿ ನಾನು ಒಂದೇ ಒಂದು ತಪ್ಪು ಮಾಡಿಲ್ಲ ಎಂದು ಹೇಳಿದರು.

ಇನ್ನೊಂದು ಪಕ್ಷ ಗೆಲ್ಲಿಸಲು ವೀಕ್ ಕ್ಯಾಂಡಿಟೇಟ್‌ಗೆ ಟಿಕೆಟ್ ಕೊಡಿಸಿಲ್ಲ. ಪಕ್ಷಕ್ಕೆ ದ್ರೋಹ ಮಾಡಿಲ್ಲ, ಪಕ್ಷ ವಿರೋಧಿ ಕೆಲಸ ಕೂಡ ಮಾಡಿಲ್ಲ‌. ಜೆಡಿಎಸ್ ವರಿಷ್ಠರು ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ ಅದಕ್ಕೆ ನಾನು ಬದ್ಧನಾಗಿರುವೆ ಎಂದರು.

ಪಕ್ಷ ಶುದ್ದಿ ಮಾಡುವ ಕಾರ್ಯ ಮೈಸೂರಿನಿಂದಲೇ ಶುರುವಾಗಲಿ ಅಂತ ಹೇಳಿದ್ದಾರೆ. ಆಗಲಿ ಅವರ ನಿರ್ಧಾರಗಳನ್ನು ನಾನು ಸ್ವಾಗತ ಮಾಡ್ತಿನಿ‌. ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ . ಏಕೆಂದರೆ
ಸರ್ಕಾರ ಬಿದ್ದ ದಿನವೇ ನಾನು ಕುಮಾರಸ್ವಾಮಿ, ರೇವಣ್ಣನಿಗೆ ಕೈಮುಗಿದು ಬಂದಿದ್ದೇನೆ ದೇವೇಗೌಡರು ಹೇಳಿದರು.

ಹುಣಸೂರಿನಲ್ಲಿ ಹರೀಶ್‌ಗೌಡರನ್ನು ನಿಲ್ಲಿಸೋಲ್ಲ ಅಂತ ಕೈಮುಗಿದು ಹೇಳಿ ಬಂದಿದ್ದೇನೆ. ಅಂದಿನಿಂದ ಇಲ್ಲಿಯವರೆಗೆ ನಾನು ಕುಮಾರಸ್ವಾಮಿ ಜೊತೆ ಮಾತನಾಡಿಲ್ಲ. ಮಾತನಾಡಲು ಏನು ಉಳಿದಿಲ್ಲ. ಹಾಗಾಗಿ ನಾನು ಯಾವುದರ ಬಗ್ಗೆಯೂ ಮಾತನಾಡೋಲ್ಲ. ಯಾರ ವಿರುದ್ದವು ಪಕ್ಷದ ನಾಯಕರಿಗೆ ದೂರು ಕೊಡೋಲ್ಲ ಎಂದು ಜಿಟಿಡಿ ಸ್ಪಷ್ಟಪಡಿಸಿ ದರು.

error: Content is protected !!