ನಾನು ರಾಜೀನಾಮೆ ನೀಡುತ್ತೇನೆ ಎನ್ನುವುದು ಶುದ್ದ ಸುಳ್ಳು – ಸಿಎಂ ಬಿಎಸ್​ವೈ

Team Newsnap
1 Min Read

ನಾನು ರಾಜೀನಾಮೆ ನೀಡುತ್ತೇನೆ ಅನ್ನೋ ಸುದ್ದಿ ಸುಳ್ಳು. ಆ ಸುದ್ದಿಗೆ ಯಾವುದೇ ಪ್ರಾಮುಖ್ಯತೆ ಬೇಡ ಎಂಸು ಸಿಎಂ ಬಿಎಸ್​ ಯಡಿಯೂರಪ್ಪ ಶನಿವಾರ ನವದೆಹಲಿಯಲ್ಲಿ ಸ್ಪಷ್ಟಪಡಿಸಿದರು.‌

ಸುದ್ದಿಗಾರರ ಜೊತೆ ಮಾತನಾಡಿರುವ ಸಿಎಂ, ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡ್ತಿದ್ದೇನೆ. ಮೇಕೆದಾಟು ಯೋಜನೆ ಸಂಬಂಧ ಕೇಂದ್ರದ ನಾಯಕರ ಬಳಿ ಚರ್ಚೆ ಬಂದಿದ್ದೇನೆ. ಈ ಯೋಜನೆ ಜಾರಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ‌

ಆಗಸ್ಟ್​​ನ ಮೊದಲ ವಾರ ಮತ್ತೆ ದೆಹಲಿಗೆ ಬರುತ್ತೇನೆ. ರಾಜೀನಾಮೆ ಪ್ರಶ್ನೆಯೇ ಇಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಆ ಸುದ್ದಿಗೆ ಪ್ರಾಮುಖ್ಯತೆ ಬೇಡ ಎಂದು ಸ್ಪಷ್ಟವಾಗಿ ಹೇಳಿದರು.

Share This Article
Leave a comment