ಆಕೆಯ ಗಂಡ ನಿತ್ಯವೂ ನೈಟ್ ಶಿಫ್ಟ್ ಕೆಲಸಕ್ಕೆ ಹೋಗವ ನೆಪದಲ್ಲಿ ಮನೆಯಿಂದ ಹೋಗುತ್ತಿದ್ದ ರಹಸ್ಯವನ್ನು ಭೇದಿಸಿ ಬಳಿಕ ಪತ್ನಿ ಸತ್ಯ ತಿಳಿದು ಆಘಾತಗೊಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತಿ ಹಾಗೂ ಪತ್ನಿಯನ್ನು ಅಭಿಲಾಷ, ಶಶಿಕುಮಾರ್ ಮದುವೆಯ ಬಳಿಕ ಬೆಂಗಳೂರಿನ ಶ್ರೀರಾಮಪುರದಲ್ಲಿ ವಾಸವಿದ್ದರು.
ಈ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ತಾನು ಇಷ್ಟಪಟ್ಟವನ ಜೊತೆಯೇ ಬದುಕಿ ಸುಂದರ ಸಂಸಾರ ಮಾಡಬಹುದೆಂಬ ಖುಷಿಯಲ್ಲಿದ್ದ ಪತ್ನಿಗೆ ಮೂರು ತಿಂಗಳಲ್ಲಿ ಶಾಕ್ ಎದುರಾಗಿತ್ತು.
ನೈಟ್ ಶಿಫ್ಟ್ ಅಂತ ಹೊರ ಹೋದ ಗಂಡನ ಫಾಲೋ ಮಾಡಿದಳು. ಈ ವೇಳೆ ಅಪರಿಚಿತರ ಮನೆ ಮುಂದೆ ಗಂಡನ ಬೈಕ್ ನೋಡಿ ಶಾಕ್ ಆದಳು.
ಇದರಿಂದ ತನ್ನ ಪತಿಯ ಮೇಲೆ ಆಕೆಗೆ ಅನುಮಾನ ಬರಲು ಆರಂಭವಾಯಿತು.
ಒಂದು ದಿನ ಆಕೆ ಪತಿಯ ನೈಟ್ ಶಿಫ್ಟ್ ರಹಸ್ಯ ಭೇದಿಸಿಯೇ ಬಿಟ್ಟಳು. ನೈಟ್ ಶೀಫ್ಟ್ ಅಂತ ಹೇಳಿಕೊಂಡು ಹೋಗುತ್ತಿದ್ದ ಪತಿ ಆತನ ಪ್ರಿಯತಮೆಯ ಮನೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿಟ್ಟ. ಮಂಚನದ ಕೆಳಗೆ ಅವಿತು ಕೂತಿದ್ದ ಪತಿರಾಯನನ್ನು ನೋಡಿ ಪತ್ನಿಯ ಸಿಟ್ಟು ನೆತ್ತಿಗೇರಿತ್ತು.
ಈ ವೇಳೆ ಪತಿಮಹಾಶಯನು ಪತ್ನಿಯನ್ನು ಯಾಕೆ ಬಂದೆ ಅಂತ ಪ್ರಶ್ನಿಸಿ ಅಲ್ಲಿಯೇ ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ. ಪ್ರೀತಿಸಿ ಮದುವೆಯಾದರೂ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಭಿಲಾಷ ತನ್ನ ತಂಗಿಗೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾಳೆ.
ಶ್ರೀ ರಾಮಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಶಶಿಕುಮಾರ್ ನನ್ನು ಬಂಧಿಸಿದ್ದಾರೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment