ಸ್ಟ್ಯಾಂಡ್ ನಲ್ಲಿದ್ದ ಶೂನಲ್ಲಿ ಬೃಹತ್ ಗಾತ್ರದ ನಾಗರಹಾವು ಕಂಡು ಮನೆ ಮಾಲೀಕರು ಬೆಚ್ಚಿಬಿದ್ದ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಜರುಗಿದೆ ನಂತರ ಬೃಹತ್ ನಾಗರಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.
ಗೋಕುಲಂ ಬಡಾವಣೆಯ ಮನೆ ಮಾಲೀಕ ಸತ್ಯನಾರಾಯಣ್ ಮನೆಯ ಹೊರಗಡೆ ಇಟ್ಟಿದ್ದ ಚಪ್ಪಲಿ ಸ್ಟ್ಯಾಂಡ್ನಲ್ಲಿ ಬೃಹತ್ ಗಾತ್ರದ ನಾಗರಹಾವು ಪ್ರತ್ಯಕ್ಷವಾಗಿದೆ.ಇದನ್ನು ಓದಿ –ಭಾರೀ ಮಳೆಗೆ ಮನೆ ಮೇಲೆ ಬಿದ್ದ ಮರ-ಮಲಗಿದ್ದಲ್ಲೇ ಇಬ್ಬರು ಮಹಿಳೆಯರ ಸಾವು
ಈ ವೇಳೆ ಮನೆ ಮಾಲೀಕ ಹಾವನ್ನ ಗಮನಿಸದೆ ಚಪ್ಪಲಿ ಸ್ಟ್ಯಾಂಡ್ಗೆ ಕೈ ಹಾಕಲು ಮುಂದಾಗಿದ್ದಾರೆ. ತಕ್ಷಣ ಬುಸುಗುಟ್ಟಿವ ನಾಗರಾಜನ ಸದ್ದು ಕೇಳಿ ಮನೆ ಮಾಲೀಕ ಬೆಚ್ಚಿ ಬಿದ್ದಿದ್ದಾರೆ.
ಕೂಡಲೇ ಮನೆ ಮಾಲೀಕರು, ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಸ್ನೇಕ್ ಶ್ಯಾಮ್ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ.
ಮಳೆ ಹಾಗೂ ತಣ್ಣನೆಯ ವಾತಾವರಣದಿಂದ ಹಾವುಗಳು ಬೆಚ್ಚಗಿನ ಪ್ರದೇಶ ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಆಗಮಿಸುತ್ತಿದೆ ಮನೆ ಹೊರ ಭಾಗದಲ್ಲಿಟ್ಟಿರುವ ಹೆಲ್ಮೆಟ್, ಶೂ ಸೇರಿದಂತೆ ಕಬೋರ್ಡ್ ಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ.
- ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್
- ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ