ಭೀಕರ ರಸ್ತೆ ಅಪಘಾತ – ಪತಿ,ಪತ್ನಿ ಮಗು ಸ್ಥಳದಲ್ಲೇ ಸಾವು – ಮಗ ಬಚಾವ್

Team Newsnap
1 Min Read

ಮೈಸೂರಿನಲ್ಲಿ ಭೀಕರ ದುರಂತ ಸಂಭವಿಸಿದೆ.
ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸ್ಥಳದಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ.

ಮೈಸೂರಿನ ಟಿ.ಕೆ.ಬಡಾವಣೆಯ ರಮೇಶ್(40), ಉಷಾ(36), ಮೋನಿಷಾ(5) ಮೃತಪಟ್ಟವರು.
ಮೂರು ವರ್ಷದ ಸಿದ್ಧಾರ್ಥ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೈಸೂರಿನ ಎನ್.ಆರ್.ಸಂಚಾರ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.‌

ಅಪಘಾತ ಸಂಭವಿಸಿದ್ದು ಹೇಗೆ?

ಮೈಸೂರು- ಬೆಂಗಳೂರು ರಿಂಗ್ ರೋಡ್ ಜೆಂಕ್ಷನ್ ಬಳಿ ವೇಗವಾಗಿ ಬರುತ್ತಿದ್ದ ಕಾರು ರೋಡ್ ಡಿವೈಡರ್ ದಾಟಿ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಮೈಸೂರಿನ ಹೊರ ವಲಯದ ಸಿದ್ಧಲಿಂಗಪುರದಿಂದ ರಮೇಶ್ ಅತ್ತೆ ಮನೆಗೆ ಹೆಂಡತಿ ಮಕ್ಕಳೊಂದಿಗೆ ಬೈಕ್ ನಲ್ಲಿ ನಗರಕ್ಕೆ ವಾಪಸ್ಸು ಬರುವ ವೇಳೆ ಈ ದುರಂತ ಸಂಭವಿಸಿದೆ.
ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment