October 16, 2024

Newsnap Kannada

The World at your finger tips!

police 1

ಹುಬ್ಬಳ್ಳಿ ಬೈಪಾಸ್‌ನಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ

Spread the love

ಹುಬ್ಬಳ್ಳಿ: ಜಿಲ್ಲಾ ಹೊರವಲಯದ ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವಸ್ಥಾನದ ಬಳಿ ಇರುವ ಬೈಪಾಸ್‌ನಲ್ಲಿ, ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಗುರುತಿಸಲಾಗದಷ್ಟು ಛಿದ್ರಗೊಂಡಿದ್ದಾರೆ, ಮತ್ತು ಪೊಲೀಸರು ಅವರ ವಿವರಗಳನ್ನು ಸಂಗ್ರಹಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಈ ಅವಘಡ ಸಂಭವಿಸಿದೆ. ಅಪಘಾತದ ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನು ಓದಿ –ರೈಲ್ವೇ ಇಲಾಖೆಯಲ್ಲಿ 3445 ‘ಕ್ಲರ್ಕ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.20 ಕೊನೆಯ ದಿನ

ಪ್ರತಿ ದಿನ ಮೃತ್ಯುಮಾರ್ಗವಾಗುತ್ತಿರುವ ಹೆದ್ದಾರಿ-1400 ನ ಹಗಲೀಕರಣದ ಅಗತ್ಯವನ್ನು ಸವಾರರು ತೀವ್ರವಾಗಿ ಒತ್ತಿ ಹೇಳುತ್ತಿದ್ದಾರೆ. ಕೆಲಸಕ್ಕೆ ಚಾಲನೆ ಸಿಕ್ಕಿ ಮೂರು ವರ್ಷಗಳಾದರೂ, ಕಾಮಗಾರಿ ಮುಗಿಯದ ಕಾರಣ ಅಪಘಾತಗಳು ತೀವ್ರವಾಗಿ ನಡೆಯುತ್ತಿವೆ.

Copyright © All rights reserved Newsnap | Newsever by AF themes.
error: Content is protected !!