January 14, 2026

Newsnap Kannada

The World at your finger tips!

board , exam , government

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ತಡೆ

Spread the love

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವದ ವಿವಾದ ಕುರಿತಂತೆ ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನಂತರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ಗಣೇಶೋತ್ಸವ ನಡೆಸುವಂತಿಲ್ಲ . ಆದರೆ ಬಕ್ರೀದ್ , ರಂಜಾನ್ ಆಚರಿಸಬಹುದು ಎಂದು ಮಧ್ಯಂತರ ತೀರ್ಪು ನೀಡಿದೆ.ಇದನ್ನು ಓದಿ –ಹನಿಟ್ರ್ಯಾಪ್‌ ಬಲೆಗೆ ಬಿದ್ದ ಬಿಲ್ಡರ್‌ : 7 ಲಕ್ಷ ರು ಸುಲಿದ ಸುಂದರಿ

ಹೈಕೋರ್ಟ್ ನ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ವಿಭಾಗಿಯ ಪೀಠ, ಈದ್ಗಾ ಮೈದಾನದ ಜಾಗವನ್ನು ಆಟದ ಮೈದಾನವಾಗಿ ಮಾತ್ರ ಬಳಕೆ ಮಾಡಬಹುದು ಎಂದು ಆದೇಶಿಸಿತು.

ಇದಲ್ಲದೇ ರಂಜಾನ್, ಬಕ್ರೀದ್ ವೇಳೆಯಲ್ಲಿ ಮಾತ್ರ ಪ್ರಾರ್ಥನೆಗೂ ಬಳಸಿಕೊಳ್ಳೋದಕ್ಕೆ ಅನುಮತಿ ನೀಡಿದೆ. ಜೊತೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆಯೂ ತಿಳಿಸಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.

error: Content is protected !!