ಪ್ರೇಯಸಿಯ ಜತೆ ಅವಳ ಅನುಮತಿ ಮೇರೆಗೆ ಕೆಲವೊಮ್ಮೆ ಮಿಲನ ನಡೆಸಿದ ಮಾತ್ರಕ್ಕೆ ಪದೇ ಪದೇ ಅವಳು ಅದಕ್ಕೆ ಅನುಮತಿ ಕೊಡುತ್ತಾಳೆ ಎನ್ನುವ ಅರ್ಥ ಕಲ್ಪಿಸಿಕೊಳ್ಳುವಂತಿಲ್ಲ. ವಾಟ್ಸ್ಆಪ್ನಲ್ಲಿ ಸೆಕ್ಸ್ಗೆ ಅನುಮತಿ ನೀಡಿ ನಂತರ ಆ ವೇಳೆ ಆಕೆ ಅದಕ್ಕೆ ನಿರಾಕರಿಸಿದರೆ ಆ ವೇಳೆಯೂ ದೈಹಿಕ ಕ್ರಿಯೆ ನಡೆಸಿದರೆ ಅದು ಅಪರಾಧ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವಾಟ್ಸ್ಆಪ್ ಸಂದೇಶವಾಗಲೀ ಅಥವಾ ಈ ಹಿಂದೆ ನಡೆಸಿದ್ದ ಸಂಬಂಧದ ಆಧಾರದ ಮೇಲೆ ಆಕೆಯ ಒಪ್ಪಿಗೆ ಇಲ್ಲದೆಯೇ ಪುನಃ ಸೇರಿದರೆ ಅದು ಅಪರಾಧ ಎಂದು ದೆಹಲಿ ಪಟಿಯಾಲಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪತ್ರಕರ್ತ ವರುಣ್ ಹಿರೇಮಠ ವಿರುದ್ಧದ ಅತ್ಯಾಚಾರ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪು ನೀಡಿ, ಆತನಿಗೆ ಜಾಮೀನು ನಿರಾಕರಿಸಿದೆ.
ದೂರು ಏನು?
ಯುವತಿಯೊಬ್ಬಳು ನೀಡಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿದೆ.
ಹೋಟೆಲ್ ಒಂದಕ್ಕೆ ಕರೆದಿದ್ದ ಸ್ನೇಹಿತ ವರುಣ್ ಹಿರೇಮಠ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಯುವತಿ ದೂರಿದ್ದಳು. ಈ ಕೇಸ್ ದಾಖಲಾಗುತ್ತಲೇ ಆತ ತಲೆ ಮರೆಸಿಕೊಂಡಿದ್ದ. ನಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.
ಈ ಸಂದರ್ಭದಲ್ಲಿ ಆತನ ಪರ ವಕೀಲರು ವಾದ ಮಂಡಿಸುತ್ತಾ, ಈ ಹಿಂದೆ ಇಬ್ಬರೂ ಒಪ್ಪಿಕೊಂಡು ಸಂಪರ್ಕ ನಡೆಸಿದ್ದಾರೆ. ಮಾತ್ರವಲ್ಲದೇ ಇನ್ಸ್ಟಾಗ್ರಾಂ ಅಥವಾ ವಾಟ್ಸಾಪ್ ಸಂದೇಶಗಳಲ್ಲಿ ಕೂಡ ಆಕೆ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ.
ಆಕೆ ಸ್ವ ಇಚ್ಛೆಯಿಂದ ಆರೋಪಿಯ ಜತೆ ಮಾತನಾಡಿಕೊಂಡೇ ದೆಹಲಿಗೆ ಬಂದಿದ್ದಾಳೆ, ಸಮ್ಮತಿಯ ಮೇರೆಗೆ ಹೋಟೆಲ್ನಲ್ಲಿ ವಾಸವಾಗಲು ನಿರ್ಧರಿಸಿದ್ದಾರೆ, ಹೋಟೆಲ್ಗೆ ಅಧಿಕೃತ ದಾಖಲೆಗಳನ್ನು ನೀಡಿಯೇ, ವಾಸವಾಗಿದ್ದಾಳೆ. ಈ ವಿಚಾರದಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ, ಇಬ್ಬರ ಅನುಮತಿ ಮೇರೆಗೆ ಸಂಪರ್ಕ ನಡೆದಿದೆ.
ಅದರೂ ಘಟನೆ ನಂತರ ಆತ ಕ್ಷಮೆ ಕೂಡ ಕೇಳಿದ್ದಾನೆ ಎಂದು ವಕೀಲರು ವಾದಿಸಿದರು.
ಆದರೆ ಈ ಸಮಯದಲ್ಲಿ ನಾನು ಅನುಮತಿ ಕೊಟ್ಟಿರಲಿಲ್ಲ ಎಂದು ಯುವತಿ ಹೇಳಿದ್ದಳು. ಆದ್ದರಿಂದ ಕೋರ್ಟ್ ಹಿಂದೆ ನಡೆದಿರುವ ಘಟನೆ ಅಥವಾ ಮೆಸೇಜ್ಗಳು ಏನೇ ಇದ್ದರೂ ಆ ಕ್ಷಣದಲ್ಲಿ ಯುವತಿಯ ಅನುಮತಿಯಿಲ್ಲದೇ ಸೇರಿದರೆ ಅದು ಅಪರಾಧ ಎಂದು ಹೇಳಿ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ವರುಣ್ನನ್ನು ಈಗ ಪೊಲೀಸರು ಬಂಧಿಸಲಿದ್ದಾರೆ.
ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More
ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More
ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
This website uses cookies.
Leave a Comment