January 28, 2026

Newsnap Kannada

The World at your finger tips!

kolar, lokayukta , SDA

7 ಸಾವಿರ ರು ಲಂಚ ಸ್ವೀಕಾರ ವೇಳೆ ಹಾವೇರಿ ಡಿಡಿಪಿಐ , ಕಚೇರಿ ಕ್ಲರ್ಕ್ ಲೋಕಾ ಬಲೆಗೆ

Spread the love

ಹಾವೇರಿ: ಪಿಂಚಣಿ ಸೌಲಭ್ಯ ಪಡೆಯಲು ನಿವೃತ್ತ ಶಿಕ್ಷಕನಿಂದ 7 ಸಾವಿರ ರು ಲಂಚದ ಬೇಡಿಕೆಯಿಟ್ಟಿದ್ದ ಹಾವೇರಿ ಡಿಡಿಪಿಐ ಹಾಗೂ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಹಾವೇರಿ ಡಿಡಿಪಿಐ ಅಂದಾನಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಲೋಕಾಯುಕ್ತ ಬಲೆಗೆ ಬಿದ್ದವರು.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಸರ್ಕಾರಿ ಉರ್ದು ಶಾಲೆಯ ನಿವೃತ್ತ ಶಿಕ್ಷಕ ಮಹಮ್ಮದ್ ಗೌಸ್ ಅವರಿಂದ 7 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆದಿದೆ.

ನಿವೃತ್ತಿ ವೇತನ ಸೌಲಭ್ಯ ಪಡೆಯಲು ಸಲ್ಲಿಸುವ ಪೈಲ್‌ನ್ನು ಎಜೆ ಆಫೀಸ್‌ಗೆ ಕಳಿಸಲು 7 ಸಾವಿರ ರು ಲಂಚ ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಸ್ವೀಕರಿಸುತ್ತಿದ್ದಾಗ ಟ್ರ್ಯಾಪ್ ಆಗಿದ್ದಾರೆ.

ಡಿಡಿಪಿಐ ಅಂದಾನಪ್ಪ ಅವರ ಗದಗ ಹಾಗೂ ಹಾವೇರಿ ನಿವಾಸದಲ್ಲಿ ಮೇಲಿನ ದಾಳಿ ಮುಂದುವರೆದಿದೆ.ಹಾಸನ ಬಳಿ ಭೀಕರ ರಸ್ತೆ ಅಪಘಾತ : ನಾಲ್ವರ ಸಾವು

ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್ ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

error: Content is protected !!