Editorial

ಹರ ಮುನಿದರೆ ಗುರು ಕಾಯುವನು – ಗುರು ಮುನಿದರೆ ಕಾಯುವವರಾರು

ಚಂಪಕ ರಾಘವೇಂದ್ರ

‘ಹರ ಮುನಿದರೆ ಗುರು ಕಾಯುವನು ಗುರು ಮುನಿದರೆ ಕಾಯುವವರಾರು’ ಎಂಬಂತೆ ಗುರುವೆಂದರೆ ಅಗಾದ ಶಕ್ತಿ,ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನೇ ಗುರು,
ಶಿಕ್ಷಕರಾಗಿ ಉಪರಾಷ್ಟ್ರಪತಿಯಾಗಿ ರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದ ಡಾ/ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಇಂದು ಶಿಕ್ಷಕರಿಗೆ ಉನ್ನತ ಗೌರವ ಸ್ಥಾನಮಾನ ತಂದುಕೊಟ್ಟ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ.

ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದಾಗಿದೆ, ಶಿಕ್ಷಕರು ಕೇವಲ ಓದು ಬರಹವನ್ನು ಮಾತ್ರ ಕಲಿಸದೆ ಮಕ್ಕಳಲ್ಲಿ ಸಂಸ್ಕಾರ ಬಿತ್ತಿ ಬದುಕಿನ ಮೌಲ್ಯಗಳನ್ನು ಕಲಿಸುತ್ತಾರೆ,ನೀತಿ ಕಥೆಗಳನ್ನು ಹೇಳುತ್ತಾ ದೇಶಾಭಿಮಾನ ಭಾಷಾಭಿಮಾನವನ್ನು ಬೆಳೆಸುತ್ತಾರೆ, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಾರೆ, ಮನೆಯೇ ಮೊದಲ ಪಾಠಶಾಲೆಯಾದರೂ ಮಕ್ಕಳು ಶಿಕ್ಷಕರ ಮಾತನ್ನೇ ಕೇಳುತ್ತಾರೆ, ಶಿಕ್ಷಕರೆಂದರೆ ಸರ್ವರಿಗೂ ಗೌರವ ಅಭಿಮಾನ ಅಕ್ಕರೆ , ನಮ್ಮ ಸಹಪಾಠಿಗಳ ಹೆಸರು ಮರೆತರು ಜೊತೆಯಲ್ಲಿಯೇ ಕೆಲಸ ಮಾಡಿದವರ ಹೆಸರನ್ನು ಮರೆತರು ಶಿಕ್ಷಕರ ಹೆಸರನ್ನು ಅವರೊಂದಿಗೆ ಕಳೆದ ಶಾಲಾ ದಿನದ ನೆನಪುಗಳನ್ನು ಎಂದಿಗೂ ಮರೆಯುವುದಿಲ್ಲ, ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಕೂಡ ತಾವು ಕಲಿತ ಶಾಲೆ ಮತ್ತು ಶಿಕ್ಷರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ

ನನಗೆ ಎಲ್ಲಾ ಶಿಕ್ಷಕರು ಅಚ್ಚುಮೆಚ್ಚು, ಆದರೂ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಯಶೋದಮ್ಮ ಎಂಬ ಶಿಕ್ಷಕಿಯೆಂದರೆ ತುಸು ಹೆಚ್ಚು ಪ್ರೀತಿ,ಅವರು ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದರು,ಅವರು ಎಲ್ಲಾ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತಿದ್ದರು, ಪ್ರತಿ ಶುಕ್ರವಾರ ಶಾರದಾಪೂಜೆ ಇರುತ್ತಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತಿದ್ದವು ನನಗೆ ಚಿಕ್ಕಂದಿನಿಂದಲೂ ನೃತ್ಯ ನಾಟಕಗಳೆಂದರೆ ಅಚ್ಚುಮೆಚ್ಚು, ಎಲ್ಲಾ ಕಾರ್ಯಕ್ರಮಗಳಲ್ಲೂ ಸ್ವಾಗತ ನೃತ್ಯ ನಾನು ಹಾಗೂ ನನ್ನ ಗೆಳತಿದಾಗಿರುತ್ತಿತ್ತು, ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು, ಗಣೇಶ ಹಬ್ಬ ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕಗಳಿರುತ್ತಿದ್ದವು, ಆ ದಿನಗಳಿಗಾಗಿಯೇ ಕಾಯುತ್ತಿದ್ದೆವು,

ಅವರಿಗೆ ಇಬ್ಬರು ಸಹೋದರಿಯರು ವಯಸ್ಸಾದ ತಂದೆಯಿದ್ದರು, ಅವರು ಇಬ್ಬರು ಸಹೋದರಿಯರಿಗೂ ತಾವೇ ದುಡಿದು ಮುಂದೆ ನಿಂತು ಮದುವೆ ಮಾಡಿದ್ದಲ್ಲದೇ ವಯಸ್ಸಾದ ತಂದೆಯನ್ನು ತಾವೇ ನೋಡಿಕೊಂಡು ಅವರು ಮಾತ್ರ ಮದುವೆಯಾಗದೆ ಹಾಗೆ ಉಳಿದಿದ್ದರು,ಕೆಲವು ವರ್ಷಗಳ ನಂತರ ಬೇರೆ ಊರಿಗೆ ವರ್ಗಾವಣೆಯಾಗಿ ಹೋಗಿದ್ದರು
ಅಂದು ಫೋನ್ ಸೌಲಭ್ಯವಿರದ ಕಾರಣ ನಂತರದ ದಿನಗಳಲ್ಲಿ ಅವರ ಕುರಿತು ಮಾಹಿತಿ ಇಲ್ಲವಾಯಿತು, ಆದರೂ ಶಿಕ್ಷಕರೆಂದೊಡನೆ ಮೊದಲಿಗೆ ನೆನಪಾಗುವ ಹೆಸರೇ ನನ್ನ ನೆಚ್ಚಿನ ಯಶೋದಮ್ಮ ಟೀಚರ್.

Team Newsnap
Leave a Comment
Share
Published by
Team Newsnap

Recent Posts

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024