ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಪತ್ನಿ ಭವಾನಿ ಭಾಗಿಯಾಗಿದ್ದರು.
ಹಾಸನ ಟಿಕೆಟ್ ಗೆ ಸಂಬಂಧಿಸಿದಂತೆ ನಡೆದ ಈ ಸಭೆಯಲ್ಲಿ ಕುಮಾರಸ್ವಾಮಿ ಅವರೇ ಮೇಲುಗೈ ಸಾಧಿಸಿದ್ದಾರೆ . ಈ ಬೆಳವಣಿಗೆಯಿಂದ ಬೇಸತ್ತು ಮೊದಲು ಭವಾನಿ ರೇವಣ್ಣ ಹೊರ ನಡೆದರೆ ಬಳಿಕ ರೇವಣ್ಣ ಕೂಡ ಹೊರ ನಡೆದರು
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್.ಡಿ ರೇವಣ್ಣ, ದೇವೇಗೌಡರಿಗೆ 40 ವರ್ಷದ ಹಾಸನ ಜಿಲ್ಲೆಯ ಅನುಭವ ಇದೆ. ಅವರಿಗೆ ಎಲ್ಲವೂ ಗೊತ್ತಿದೆ. ಅವರು ಏನು ಹೇಳುತ್ತಾರೆ ಅದೇ ಅಂತಿಮ ತೀರ್ಮಾನ. ನಮ್ಮದೇನೂ ಇಲ್ಲ. ಯಾರು ಗಾಬರಿ ಆಗೋದು ಬೇಡ. ನನ್ನಾಸೆ ಒಂದೇ ಈ ರಾಜ್ಯಕ್ಕೆ ಕುಮಾರಣ್ಣರನ್ನು ಮತ್ತೆ ಸಿಎಂ ಮಾಡಬೇಕು. ಹಾಸನದಲ್ಲಿ ನಮ್ಮ ಹತ್ರನೆ ಇದ್ದು, ನಮ್ಮ ಹತ್ತಿರವೇ ಬೆಳೆದು, ನಮಗೆ ಇವತ್ತು ಟೋಪಿ ಹಾಕುತ್ತಿದ್ದಾರೆ. ಇದಕ್ಕೆ ನಾವು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದರು.
ಭವಾನಿಯವರು ಬೆಂಗಳೂರಿನ ಗೌಡರ ನಿವಾಸಕ್ಕೆ ಬಂದು ನಮ್ಮ ತಾಯಿಯವರ ಆಶೀರ್ವಾದ ಪಡೆದರು. ಊರಿನಲ್ಲಿ ಪೂಜೆಯಿತ್ತು. ಹೀಗಾಗಿ ತಾಯಿಯವರ ಬಳಿ ಮಾತನಾಡಿದರು. ದೇವೇಗೌಡರ ಬಳಿ ಯಾವುದೇ ರಾಜಕೀಯ ಚರ್ಚೆಗೆ ಭವಾನಿಯವರು ಬಂದಿರಲಿಲ್ಲ. ಭವಾನಿಯವರು ಅವತ್ತೇ ಹೇಳಿದ್ದಾರೆ.
ನನಗೆ ಬೇಕಾಗಿರುವುದು ನಮ್ಮ ಮಾವ. ಅವರು ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ ಎಂದಿದ್ದಾರೆ ಅಂತಾ ಪತ್ನಿ ಪರ ಬ್ಯಾಟ್ ಬೀಸಿದರು.ಇದನ್ನು ಓದಿ –ಬೆಂಗಳೂರಿನ ನಾಯಂಡನಹಳ್ಳಿ ಬಳಿ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು
ಬೆಂಗಳೂರು : ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ, ಮಂಡ್ಯದ ಹನಕೆರೆ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲು… Read More
ನವದೆಹಲಿ ,ಮೇ 12 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ದಾಖಲಾಗಿದೆ. 24… Read More
ನಮ್ಮ ಪೋಲಿಸರು ಸಮರ್ಥರಿದ್ದಾರೆ ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More
ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್ಎಸ್ಎಲ್ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More
ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More
ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More
This website uses cookies.
Leave a Comment