Main News

HD ಕುಮಾರಸ್ವಾಮಿಗೆ ಪಿಎಸ್‍ಐ ಅಭ್ಯರ್ಥಿಗಳಿಂದ ಮುತ್ತಿಗೆ ಯತ್ನ- ಅಡ್ಡ ಬಂದವನಿಗೆ ಥಳಿಸಿದ ಗನ್‍ಮ್ಯಾನ್

ಧಾರವಾಡದ ಕರ್ನಾಟಕ ವಿವಿಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದ ವೇಳೆ ಭಾರೀ ಹೈಡ್ರಾಮಾ ನಡೆದಿದೆ.ಈ ವೇಳೆ ಅಡ್ಡಬಂದ ಪಿಎಸ್‍ಐ ಅಭ್ಯರ್ಥಿಗೆ ಗನ್ ಮ್ಯಾನ್ ಥಳಿಸಿದ ಘಟನೆ ನಡೆದಿದೆ.

ಪಿಎಸ್‍ಐ ಮರು ಪರೀಕ್ಷೆಗೆ ಆಗ್ರಹಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಿಎಂ ಅಲ್ಲಿಗೆ ಭೇಟಿ ನೀಡಿದ್ದಾರೆ
ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳಿಗೆ ಅನ್ಯಾಯ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಈ ಮಾತು ವಾಪಸ್ ಪಡೆಯಬೇಕು ಎಂದು ಪಿಎಸ್ ಐ ಅಭ್ಯರ್ಥಿಗಳು ಪಟ್ಟು ಹಿಡಿದರು .ಇದನ್ನು ಓದಿ – ನಾವು RSS ಖಾಕಿ ಚಡ್ಡಿ ಸುಡುತ್ತೇವೆ :. ಅದು ರಾಷ್ಟ್ರ ಧ್ವಜವಲ್ಲ – NSUI ಭವ್ಯ

ಆರಂಭದಲ್ಲೇ ಎಚ್‍ಡಿಕೆ ಮತ್ತು ಅಭ್ಯರ್ಥಿಗಳ ಮಧ್ಯೆ ವಾಗ್ವಾದ ನಡೆಯಿತು. ಈ ಹಿನ್ನೆಲೆ ವಾಪಸ್ ಹೋಗುವಾಗ ಎಚ್‍ಡಿಕೆ ಕಾರ್ ಗೆ ಪಿಎಸ್‍ಐ ನೇಮಕಾತಿ ವಂಚಿತ ಅಭ್ಯರ್ಥಿಗಳು ಘೇರಾವ್ ಹಾಕಲು ಯತ್ನಿಸಿದ್ದಾರೆ. ಎಚ್‍ಡಿಕೆ ವಾಹನವನ್ನು ಅಭ್ಯರ್ಥಿಗಳು ಬೆನ್ನತ್ತಿ ಹೋದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.

ಕೊನೆಗೆ ವೇಗವಾಗಿ ವಾಹನ ಚಲಾಯಿಸುವ ಮೂಲಕ ಎಚ್‍ಡಿಕೆ ಭಾರೀ ಅಪಾಯದಿಂದ ಪಾರಾದರು. ಇತ್ತ ಕುಮಾರಸ್ವಾಮಿ ವಾಹನವನ್ನು ಬೆನ್ನಟ್ಟಿದ್ದ ಪಿಎಸ್ ಐ ಅಭ್ಯರ್ಥಿ ಮೇಲೆ ಕುಮಾರಸ್ವಾಮಿ ಗನ್‍ಮ್ಯಾನ್ ಹಲ್ಲೆ ನಡೆಸಿದ್ದಾರೆ. ಇದನ್ನು ಓದಿ –ಪರಿಷತ್ ಚುನಾವಣೆ: ಮತದಾರರ ಸೆಳೆಯಲು ಹಣ, ಹೆಂಡ, ಬಾಡೂಟದ್ದೇ ದರ್ಬಾರು !

ಧಾರವಾಡದಲ್ಲಿ HDK ಗನ್ ಮ್ಯಾನ್ ಪಿಎಸ್ ಐ ಅಭ್ಯರ್ಥಿ ಮೇಲೆ ಹಲ್ಲೆ ವಿಚಾರ ಸಂಬಂಧ ಹಲ್ಲೆಗೆ ಒಳಗಾದ ರಾಘು ಮಾತನಾಡಿ, ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ನಾವು ಮನವಿ ಕೊಡಲು ಬಂದಿದ್ದೆವು. ಶಾಂತಿಯುತವಾಗಿ ಕುಮಾರಸ್ವಾಮಿಗೆ ಮನವಿ ಕೊಡಲು ಬಂದಿದ್ದೆವು. ಅವರು ಕಾರು ಸ್ಟಾಪ್ ಮಾಡದೇ ಹೋದರು. ನಾವು ಗೂಂಡಾಗಿರಿ ಮಾಡಲು ಬಂದಿರಲಿಲ್ಲ. ನಾವು ಪೊಲೀಸ್ ಆಗುವವರು, ನಮಗೆ ಅನ್ಯಾಯ ಆಗಿದೆ ಎಂದರು.
ವಾಹನದ ಹಿಂದೆ ಹೋಗಿದ್ದರಿಂದ ಪೊಲೀಸರು ನಮ್ಮನ್ನು ತಳ್ಳಾಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿ 56 ಸಾವಿರ ಜನರಿಗೆ ನ್ಯಾಯ ಕೊಡಬೇಕು. ಪರೀಕ್ಷೆ ದಿನಾಂಕ ಘೋಷಣೆ ಮಾಡಿ. ದಿನೇ ದಿನೇ ನಮಗೆ ಓದಲು ಆಗುತ್ತಿಲ್ಲ. ಮರು ಪರೀಕ್ಷೆ ಕ್ಯಾನ್ಸಲ್ ಎನ್ನುತ್ತಿದ್ದಾರೆ. 545 ಜನರಿಗಷ್ಟೆ ಅನ್ಯಾಯವಾಗಿದೆಯಾ ಎಂದು ರಾಘು ಪ್ರಶ್ನಿಸಿದರು.

HDK

Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024