February 20, 2026

Newsnap Kannada

The World at your finger tips!

sumalatha 1

ಗ್ರಾಪಂ ಚುನಾವಣೆ: ಅಂಬಿ, ಸುಮಾಲತಾ ಭಾವಚಿತ್ರ ಬಳಕೆ!

Spread the love

ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷಾತೀತವಾಗಿ ನಡೆಯಬೇಕು. ಯಾವುದೇ ರಾಜಕಾರಣಿಗಳ ಹೆಸರು, ಫೋಟೊ ಬಳಕೆ ಮಾಡುವಂತಿಲ್ಲ. ಆದರೆ ಅಂಬಿ , ಸುಮಲತಾ ಅವರ ಭಾವ ಚಿತ್ರ ಮತ್ತು ಹೆಸರು ಬಳಕೆ ಮಾಡಿಕೊಂಡು ಅಭ್ಯರ್ಥಿಯೊಬ್ಬರು ಪ್ರಚಾರ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮಂಡ್ಯ ತಾಲೂಕಿನ ಬಸರಾಳು ಗ್ರಾ.ಪಂ ವ್ಯಾಪ್ತಿಯ ಬೆನ್ನಹಟ್ಟಿಯಿಂದ ಸ್ಪರ್ಧೆ ಮಾಡಿರುವ ಪ್ರದೀಪ್.

ಸಂಸದೆ ಸುಮಲತಾ ಬೆಂಬಲಿಗನಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬುವುದು ವಿರೋಧಿ ಅಭ್ಯರ್ಥಿ ಆರೋಪ.

ಬಿ.ಎಸ್. ಪ್ರದೀಪ್, ನೀತಿ ಸಂಹಿತೆ ಉಲ್ಲಂಘಿಸಿರುವ ಸುಮಲತಾ ಬೆಂಬಲಿಗ. ಅಂಬರೀಷ್, ಸುಮಲತಾ ಭಾವಚಿತ್ರ ಬಳಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ.

ರಾಜಕೀಯ ಮುಖಂಡರ ಭಾವಚಿತ್ರ ಬಳಕೆ ನೀತಿ ಸಂಹಿತೆ ಉಲ್ಲಂಘನೆ ಯಾಗುತ್ತದೆ. ಮಾಜಿ ಸಚಿವ ಅಂಬರೀಶ್, ಸಂಸದೆ ಸುಮಲತಾ ಅಂಬರೀಶ್ ಭಾವಚಿತ್ರದ ಜೊತೆಗೆ ಕಹಳೆ ಊದುತ್ತಿರುವ ಮನುಷ್ಯನ ಭಾವಚಿತ್ರದೊಂದಿಗೆ ಪ್ರಚಾರ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

error: Content is protected !!