ದೇವರೇ ನಮ್ಮ ಗಂಡ ಬೇಗ ವಾಪಸ್ಸು ಬರ್ಲೆಪ್ಪ! ದೇವರಿಗೆ ಪತ್ರ ಬರೆದ ಮಹಿಳೆಯರು

Team Newsnap
1 Min Read

ಗಂಡ ಬೇಗ ವಾಪಸ್ ಬರಲೆಂದು ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.

ಕೌಟುಂಬಿಕ ಕಲಹದಿಂದ ಬೇಸತ್ತ ಮನೆ ಬಿಟ್ಟು ಹೋಗಿರುವ ಇಬ್ಬರ‌ ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.

ಈ ಪತ್ರಗಳು ನಾರಾಯಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಪತ್ತೆಯಾಗಿದೆ.

ಪತ್ರದಲ್ಲಿ ಮಹಿಳೆಯರು ತಮ್ಮನ್ನು ಬಿಟ್ಟು ಹೋಗಿರುವ ಗಂಡಂದಿರು ಮನೆಗೆ ವಾಪಸ್ ಬರಬೇಕು. ನಾವು ಹೇಳಿದಂತೆ ನಮ್ಮ ಗಂಡ ಕೇಳಬೇಕು ಎಂಬ ಒಕ್ಕಣೆಯುಳ್ಳ ಎರಡು ಪತ್ರಗಳನ್ನು ಹುಂಡಿಗೆ ಹಾಕಿದ್ದಾರೆ.

ಪತ್ರದಲ್ಲಿ, ನನ್ನ ಗಂಡ ಜಗಳವಾಡಿಕೊಂಡು ನನ್ನನ್ನು ಬಿಟ್ಟು ಹೋಗಿದ್ದಾನೆ. ಅವನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡಲು ಕಳುಹಿಸು. ನಾನು ಹೇಳಿದಂತೆ ನನ್ನ ಗಂಡ ಕೇಳಬೇಕು. ಇಲ್ಲದಿದ್ದರೆ ಅದಕ್ಕೆ ನೀನೆ ಹೊಣೆ ಎಂದು ಸಹ ಪತ್ರಗಳಲ್ಲಿ ಬರೆಯಲಾಗಿದೆ.

ಆದರೆ ಈ ಪತ್ರದಲ್ಲಿ ಮಹಿಳೆಯರ ಹೆಸರು, ವಿಳಾಸ ಯಾವುದು ಇಲ್ಲ. ದೇವಸ್ಥಾನದ ಹುಂಡಿಯಲ್ಲಿ ಹಣ ಎಣಿಕೆ ಮಾಡುವ ಮುನ್ನ‌ ಈ ಪತ್ರಗಳು ಸಿಕ್ಕಿವೆ.

Share This Article
Leave a comment