ಅ. 28 ರಂದು ಗಂಧದಗುಡಿ ಚಿತ್ರ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಇಂದು ಸಂಜೆ ವೇಳೆ ‘ಪುನೀತ ಪರ್ವ’ ಬಹಳ ಅದ್ಧೂರಿಯಾಗಿ ನಡೆಯಲಿದೆ.
ಗಂಧದಗುಡಿ ಪ್ರಿ-ರಿಲೀಸ್ ಇವೆಂಟ್ ಗೆ ಅರಮನೆ ಮೈದಾನದಲ್ಲಿ ಸಕಲ ತಯಾರಿಯೂ ಪೂರ್ಣಗೊಂಡಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಯುವ ಹಾಗೂ ವಿನಯ್ ರಾಜ್ ಕುಮಾರ್ ಎಲ್ಲರೂ ಪ್ಯಾಲೇಸ್ ಗ್ರೌಂಡ್ನಲ್ಲಿ ಪ್ರಿಪರೇಷನ್ ಹೇಗೆ ಆಗ್ತಿದೆ ಅಂತ ಪರಿಶೀಲನೆ ಮಾಡಿದ್ದಾರೆ.
‘ಪುನೀತ ಪರ್ವ’ವನ್ನು ಬಹಳ ದೊಡ್ಡದಾಗಿ ನಡೆಸಲು ಅಶ್ವಿನಿ ಮತ್ತು ತಂಡ ನಿರ್ಧರಿಸಿದ್ದಾರೆ ಅದಕ್ಕಾಗಿ 5 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ. 7500 ಅಡಿ LED ಸ್ಕ್ರೀನ್ ಅಳವಡಿಕೆ ಮಾಡಲಾಗಿದ್ದು, 3000 ಸಾವಿರಕ್ಕೂ ಹೆಚ್ಚು ಅಸನದ ವ್ಯವಸ್ಥೆ ಇರಲಿದೆ. ಇನ್ನು ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ವಿವಿಐಪಿಗಳು, 5000 ವಿಐಪಿಗಳು ಭಾಗಿಯಾಗಲಿದ್ದಾರಂತೆ.
ಪುನೀತ ಪರ್ವಕ್ಕೆ ಭಾರತೀಯ ಸಿನಿಮಾರಂಗದ ಸೂಪರ್ಸ್ಟಾರ್ಗಳಿಗೆಲ್ಲಾ ಆಹ್ವಾನ ನೀಡಲಾಗಿದೆ. ಚಿರಂಜೀವಿ, ಕಮಲ್ ಹಾಸನ್, ರಜನಿಕಾಂತ್, ಸೂರ್ಯ, ಸೇರಿ ಹಲವು ಪರಭಾಷೆ ತಾರೆಯರು ಇವೆಂಟ್ಗೆ ಬರೋ ನಿರೀಕ್ಷೆಯಿದೆ. ಶಿವಣ್ಣ, ಮೋಹಕತಾರೆ ರಮ್ಯಾ ಹಾಗೂ ಪ್ರಭುದೇವ ಅವರಿಂದ ಸ್ಪೆಷಲ್ ಪರ್ಫಾಮೆನ್ಸ್ ಪ್ಲಾನ್ ಆಗಿದ್ದು, ಥ್ರಿಲ್ ಹೆಚ್ಚಿಸಿದೆ.
ಗಂಧದಗುಡಿ ಇವೆಂಟ್ಗೆ ವೈಟ್ ಕಲರ್ ಡ್ರೆಸ್ಕೋಡ್ಇದೆ ಬರುವ ಗಣ್ಯರೆಲ್ಲರು ಬಿಳಿಬಣ್ಣದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಅ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ