ಮೃದುಪಾದ ಸವಿಮೋದ
ಮಧುರವೀ ನಗುಮನದ
ಹದುಳುತನ ಸಂಪಿಗೆಯು ಜೀಕುತಿರಲು
ನಿದಿರೆಯಲಿ ಸೊಗಸಾಗಿ
ಪದರೇಣು ಕಣದೊಳಗೆ
ಪದರಂಗ ತುಂಬುವುದ ಕಾಯುತಿರಲು…
ಬುವಿಯೆಲ್ಲ ಕಾದಿರಲು
ಭವರೋಗ ತೊಲಗಿಸಲು
ಕವಿದಿರುವ ಮನಗಳಿಗೆ ಜೀವಾಮೃತ
ಅವನಿಯಲಿ ಕೃತಕೃತ್ಯ
ಪವಣಿಸುತ ನೋಡುವನು
ಪವಡಿಸುವ ಯದುನಂದ ಕೃಷ್ಣಾಮೃತ..
ಮಥುರೆಯಾ ಮಣ್ಣಿನಲಿ
ಪತಿತಪಾವನನ ಸಿರಿ
ಮತಭೇದವಿಲ್ಲದೇ ಶೋಭಿಸುತಿದೆ
ಮೆತುವಾದ ನುಡಿಗಳಲಿ
ಲತೆಯಂತೆ ಮೋಹಕವು
ವಿತತದೊಳು ಹೊಮ್ಮುತಿಹ ನಾದದಂತೆ||
ಯದುಕುಲದ ಮಾಣಿಕ್ಯ
ವದನದಲಿ ನಗೆಬೀರಿ
ವಧಿಸಿದಾ ಕಂಸನನು ಬಾಲಕೃಷ್ಣ
ವಿದಳಿಸುತ ಜನಜನಿತ
ವಿದಿತನಿವ ಮಾಧವನು
ಮುದಿತದೊಳು ಮುನ್ನುಗ್ಗಿ ಮೆರೆದಾಡಿದ||
ಎದ್ದು ಬಾ ಗೆದ್ದು ಬಾ
ಸದ್ದು ಮಾಡುತ ನೀನು
ಬಿದ್ದಿರದೆ ಸಿದ್ಧತೆಯ ಮಾಡುತಿರು ನೀ
ಮುದ್ದಿನಲಿ ನಗಿಸುತಿಹ
ಬದ್ಧತೆಯ ತೋರುತಲಿ
ಮೆದ್ದು ಬಾ ಬೆಣ್ಣೆಯನು ಮುರುಳಿಲೋಲ
ಮೈಸೂರು : ಶ್ರೀನಿವಾಸ್ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ನಾಳೆ ಮಾಡಲಾಗುತ್ತದೆ ಎಂದು ಮಗಳು ಪ್ರತಿಮಾ ಪ್ರಸಾದ್… Read More
ಮೈಸೂರು : ಉದಯಗಿರಿ ಪೊಲೀಸ್ ಠಾಣೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ… Read More
ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಮೂತ್ರಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು… Read More
ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More
ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More
ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More
This website uses cookies.
Leave a Comment