Main News

ಸೋತರೆ ಅಕ್ರಮ ಬಯಲಿಗೆ ತರುವೆ ಎಂದಿದ್ದ ಗಂಗಮ್ಮ ಪಡೆದ ಮತ ಕೇವಲ 6 !

ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್​​ನಿಂದ ಗಂಗಮ್ಮ ಭಾರಿ ಸುದ್ದು ಮಾಡಿದ್ದರು. ಅವರು ಮುದ್ರಿಸಿ ಹಂಚಿಕೆ ಮಾಡಿದ್ದ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ಜಾಲಾಡಿ ಹೋಗಿತ್ತು. ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.

ನಾನು ಗೆದ್ದರೆ‌ ಗ್ರಾಮದಲ್ಲಿ ಅರಳಿ ಕಟ್ಟೆ ಕಟ್ಟಿಸುತ್ತೇನೆ, ಊರಿಗೆ ರಸ್ತೆ ಮಾಡಿಸುತ್ತೇನೆ ಎಂದು ಹಲವಾರು ಭರವಸೆ ನೀಡಿದ್ದರು. ಸೋತರೆ ಗ್ರಾಮದಲ್ಲಿ ನಡೆದಿರುವ ಅಕ್ರಮ ಗಳನ್ನು ಬಯಲಿಗೆ ಎಳೆಯುತ್ತೇನೆ ಅನ್ನುವ ಅರ್ಥದಲ್ಲಿ ಕರ ಪತ್ರದಲ್ಲಿ ಬ್ಲ್ಯಾಕ್ ಮೇಲ್ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಆ ಗ್ರಾಮದ ಮತದಾರರು ಗಂಗಮ್ಮ ನನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ.

ಗಂಗಮ್ಮ ಪಡೆದ ಮತ ಕೇವಲ ಆರು:

ಗಂಗಮ್ಮ ಹಂಚಿಕೆ ಮಾಡಿದ್ದ ಕರಪತ್ರ
ಭಾರಿ ವೈರಲ್​ ಆಗಿತ್ತು. ಗೆಲುವಿನ ಜೊತೆ ಸೋತರೆ ಏನು ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು.

ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡುತ್ತೇನೆ, ಸರ್ವೇ ನಂಬರ್ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವುದು ಸೇರಿ ಹಲವು ಭರವಸೆಗಳನ್ನು ನೀಡಿದ್ದರು.

ಈ ಗಂಗಮ್ಮ ಗೆದ್ದರೆ ಮಾಡುವುದು ಅಷ್ಟರಲ್ಲೇ ಇದೆ. ಸೋಲಿಸಿದರೆ ಅದೇ ಏನೂ ಮಾಡುತ್ತಾರೋ ನೋಡೋಣ ಎಂಬ ತೀರ್ಮಾನ ಮಾಡಿದ ಮತದಾರರು ಕೇವಲ 6 ಮತಗಳನ್ನು ಮಾತ್ರ ನೀಡಿದ್ದಾರೆ.

ಒಂದು ಆಶ್ಚರ್ಯಕರ ಸಂಗತಿ ಎಂದರೆ ಚುನಾವಣಗೆ ಸ್ಪರ್ಧಿಸಿದ್ದ ಗಂಗಮ್ಮ ನೇ ಮತದಾನದ ದಿನ ಮತಗಟ್ಟೆ ಬಂದು ಮತ ಹಾಕಲಿಲ್ಲ. ಎಲ್ಲೋ ಹೋಗಿದ್ದರೆಂದು ಗ್ರಾಮದ ಕೆಲವರು ಹೇಳುತ್ತಾರೆ.

Team Newsnap
Leave a Comment
Share
Published by
Team Newsnap

Recent Posts

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024