January 29, 2026

Newsnap Kannada

The World at your finger tips!

gandhiji mysore

ಸಾಂಸ್ಕೃತಿಕ ನಗರಿಯಲ್ಲಿ‌ ಗಾಂಧಿ ಪ್ರತಿಮೆ ಭಗ್ನ

Spread the love

ಸಾಂಸ್ಕೃತಿಕ ನಗರಿ ಮೈಸೂರಿನ ಸುಬ್ಬರಾಯನ ಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಕಿಡಿಗೇಡಿಗಳು‌ ಭಗ್ನಗೊಳಿಸಿದ‌ ಘಟನೆ ನಡೆದಿದೆ.

ದಂಡಿ ಯಾತ್ರೆಯ ಪ್ರತಿಕೃತಿಯಾಗಿರುವ ಈ ಪ್ರತಿಮೆಯಲ್ಲಿ ಗಾಂಧಿಯವರ ಕೈಯಲ್ಲಿನ‌ ಕೋಲು ಹಾಗೂ ಎಡಗೈ ಭಗ್ನಗೊಂಡಿವೆ. ಈ ಘಟನೆಯನ್ನು ವಿರೋಧಿಸಿರುವ ಸ್ಥಳೀಯ ನಾಗರೀಕರು ಉದ್ಯಾನವನದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಪ್ರಸ್ತುತ ಮಾದಕ‌ ವ್ಯಸನಿಗಳು ಈ ಕೃತ್ಯವನ್ನು ನಡೆಸಿರಬಹುದೆಂದು ಸ್ಥಳೀಯರು ಆರೋಪಿಸಿದ್ದಾರೆ. ತನಿಖೆಯ ನಂತರವೇ ಯಾರು ಈ ದುಷ್ಕೃತ್ಯವನ್ನು ಎಸಗಿದ್ದಾರೆ ಎಂದು ತಿಳಿಯಲಿದೆ.

error: Content is protected !!