Trending

ಫ್ರೆಂಚ್​ ಓಪನ್​​: ನಡಾಲ್​ಗೆ ದಾಖಲೆಯ ಗ್ರ್ಯಾನ್​ಸ್ಲಾಮ್​ ಕಿರೀಟ!

ಟೆನ್ನಿಸ್​ ದಿಗ್ಗಜ ಸ್ಪೇನ್​​ನ ರಾಫೆಲ್​ ನಡಾಲ್​​​​ ಮತ್ತೊಂದು ಗ್ರ್ಯಾನ್​ಸ್ಲಾಮ್​ ಕಿರೀಟ ತೊಟ್ಟಿದ್ದಾರೆ. 22ನೇ ಗ್ಯಾನ್​ಸ್ಲಾಮ್​ ಗೆದ್ದು ಚರಿತ್ರೆ ಸೃಷ್ಟಿಸಿ 14ನೇ ಫ್ರೆಂಚ್​ ಓಪನ್​​​​ ಟೈಟಲ್​​ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

2022ರ ಫ್ರೆಂಚ್​ ಓಪನ್​​ ಪುರುಷರ ಸಿಂಗಲ್ಸ್‌ ಫೈನಲ್​​​ ಪಂದ್ಯದಲ್ಲಿ ಗೆದ್ದ ರಾಫೆಲ್​ ನಡಾಲ್​, 6-3, 6-3, 6-0 ನೇರ ಸೆಟ್​​​ಗಳಿಂದ ಭರ್ಜರಿ ಗೆಲುವು ದಾಖಲಿಸಿದರು.

ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶ ಪಡೆದಿದ್ದ ಕಾಸ್ಪರ್​ ರೂಡ್​ ಸೋತು ನಿರಾಸೆ ಅನುಭವಿಸಿದರು. ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಟ ಆರಂಭದಿಂದಲೂ ನಡಾಲ್​ ಮೇಲುಗೈ ಸಾಧಿಸಿದರು. ಇದನ್ನು ಓದಿ : ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿ: ಸ್ಥಳಾಂತರ

ಮೊದಲ ಸೆಟ್​​ನಲ್ಲಿ ಹೀನಾಯ ಹಿನ್ನಡೆ ಅನುಭವಿಸಿದ್ದ ರೂಡ್​, 2ನೇ ಸೆಟ್​​ನಲ್ಲಿ ಕೊಂಚ ಹೋರಾಟ ನಡೆಸಿದರು. ಕೊನೆಗೆ ಆ ಸೆಟ್​ ಕೂಡ ನಡಾಲ್​ ಪಾಲಾಯಿತು.

ಇನ್ನು ಮೂರನೇ ಸೆಟ್​​​ನಲ್ಲಿ ಕಾಸ್ಪರ್​​ ರೂಡ್​​​, ಯಾವುದೇ ಹಂತದಲ್ಲೂ ಪ್ರತಿರೋಧ ನೀಡಲೇ ಇಲ್ಲ. 22ನೇ ಗ್ರ್ಯಾನ್​ಸ್ಲಾಮ್​ಗೆ ಮುತ್ತಿಕ್ಕಿರುವ ನಡಾಲ್​, ಹೆಚ್ಚು ಗ್ರ್ಯಾನ್​​ಸ್ಲಾಮ್​ ಗೆದ್ದ ಟೆನ್ನಿಸ್​ ಕಿಂಗ್​ ಎನಿಸಿಕೊಂಡಿದ್ದಾರೆ. ರೋಜರ್​​ ಫೆಡರರ್​​​ ಮತ್ತು ನೋವಾಕ್​ ಜೋಕೋವಿಚ್​ ತಲಾ 20 ಗ್ರ್ಯಾನ್​ಸ್ಲಾಮ್​ ಗೆದ್ದು 2ನೇ ಸ್ಥಾನದಲ್ಲಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024