ಮಂಗಳೂರು, ಬೆಂಗಳೂರಿನಲ್ಲಿ ಐಸಿಸ್ ಜತೆ ಸಂಪರ್ಕ: ನಾಲ್ವರು ಉಗ್ರರ ಬಂಧನ‌

Team Newsnap
1 Min Read

ಸಾಮಾಜಿಕ ಜಾಲ ತಾಣ ಬಳಸಿಕೊಂಡು ಐಸಿಸ್ ಉಗ್ರ ಚಟುವಟಿಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ
ಎನ್ ಐಎ ( ರಾಷ್ಟ್ರೀಯ ತನಿಖಾ ದಳ) ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ದೇಶದ ಐದು ಕಡೆ ದಾಳಿ ನಡೆಸಿದೆ.

ಐಸಿಸ್ ಜತೆ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಬಂಧಿಸಿದೆ.

ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್ ಹಾಗೂ ಮಂಗಳೂರಿನ ಅಮ್ಮರ್ ಅಬ್ದುಲ್ ರೆಹಮಾನ್ ಸೇರಿ ನಾಲ್ವರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಶ್ಮೀರದ ಶ್ರೀನಗರ ನಿವಾಸಿ ಬೆಮೀನಾ, ಮುಜಮಿಲ್ ಹಸೀನ್ ಭಟ್ ಕೂಡ ಬಂಧನಕ್ಕೆ ಒಳಗಾಗಿದ್ದಾರೆ.

2021 ರ ಮಾ. 5 ರಂದು ಕೇರಳಾ ಮೂಲದ ಮೊಹಮದ್ ಅಮೀನ್ ಸೇರಿದಂತೆ ಮೂವರು ಉಗ್ರರನ್ನು ಎನ್‌ಐಎ ಬಂಧಿಸಿತ್ತು.

ಇದೀಗ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಬಂಧಿತ ಇಬ್ಬರು ಆರೋಪಿಗಳು ಪ್ರಮುಖ ಆರೋಪಿ ಕೇರಳ ಮೂಲದ ಅಮೀನ್ ಜತೆ ಸಂಪರ್ಕ ಹೊಂದಿವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Share This Article
Leave a comment