ಕ್ವಾಲೀಸ್ ಹಿಂದಿನಿಂದ ಟಾಟಾಸುಮೋಗೆ ಡಿಕ್ಕಿ – ನಾಲ್ವರ ಸಾವು ,10 ಮಂದಿಗೆ ಗಾಯ

Team Newsnap
0 Min Read

ಕ್ವಾಲಿಸ್ ಕಾರ್ ಹಿಂದಿನಿಂದ ಡಿಕ್ಕಿಯಾದ ರಭಸಕ್ಕೆ ಟಾಟಾಸುಮೋ ಪಲ್ಟಿಯಾಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿ, 10 ಮಂದಿ ಗಾಯಗೊಂಡ ಘಟನೆ ಹಾಸನ ಬಳಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.

ಮೃತರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಟಾಟಾಸುಮೋ ಪಲ್ಟಿಯಾಗಿದ್ದು, ಅದರಲ್ಲಿದ್ದ 10 ಮಂದಿಯೂ ಗಾಯಗೊಂಡಿದ್ದಾರೆ. ಎಲ್ಲರೂ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸನದ ಹೊರ ವಲಯದಲ್ಲಿನ ಬೆಂಗಳೂರು ಮಂಗಳೂರು ಹೆದ್ದಾರಿಯ ಕೆಂಚಟ್ಟಳ್ಳಿ ಬಳಿ ಹಮ್ಸ್ ಬಳಿ ಟಾಟಾಸುಮೋ ಬ್ರೇಕ್ ಹಾಕಿ ನಿಧಾನ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಡಿಕ್ಕಿಯೊಡೆದಿದೆ.

Share This Article
Leave a comment