ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಬಾಲಕರು ಜಲ ಸಮಾಧಿ – ಟಿ. ನರಸೀಪುರದ ಹೆಮ್ಮಿಗೆಯಲ್ಲಿ ದುರಂತ

Team Newsnap
0 Min Read

ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಬಾಲಕರು ಜಲ ಸಮಾಧಿಯಾದ ಘಟನೆ ತಿ ನರಸೀಪುರ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಗುರುವಾರ ಜರುಗಿದೆ.

ರಾಜು ಪುತ್ರ ಯಶವಂತ ಕುಮಾರ್ (15) ಮಂಚಯ್ಯನವರ ಪುತ್ರ ಮಹದೇವ್ ಪ್ರಸಾದ್ (14) ನಿಂಗರಾಜು ಪುತ್ರ ಕಿಶೋರ್ (13) ಹಾಗೂ ಮಲ್ಲಿಕಾರ್ಜುನ ಮಗ ಆಕಾಶ್ (13) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು.

ಇಬ್ಬರು ಬಾಲಕರಾದ ಯಶವಂತ ಹಾಗೂ ಮಹದೇವ್ ಪ್ರಸಾದ್ ವಶಗಳು ಪತ್ತೆಯಾಗಿವೆ. ಇನ್ನೆರಡು ಶವಗಳ ಪತ್ತೆ ಕಾರ್ಯ ಭರದಿಂದ ಸಾಗಿದೆ.
ತಲಕಾಡು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment