ಸಬ್ಬನಕುಪ್ಪೆ ಮಂಡಲ ಮಾಜಿ ಪ್ರಧಾನ ಕೆ. ಜಯರಾಂ ನಿಧನ‌

Team Newsnap
1 Min Read

ಶ್ರೀ ರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ಮಂಡಲ ಮಾಜಿ ಪ್ರಧಾನ ಹಾಗೂ ಹತ್ತಾರು ಹಳ್ಳಿಗಳ ನ್ಯಾಯ ಪಂಚಾಯತಿ ಮುಖ್ಯಸ್ಥ
ಕೆ ಜಯರಾಂ (87) ಬುಧವಾರ ಸ್ವಗ್ರಾಮದಲ್ಲಿ ನಿಧನರಾದರು.

ಮೃತರು ಪತ್ನಿ , ಮೂವರು ಪುತ್ರರು, ಓರ್ವ ಪುತ್ರಿ , ಸೊಸೆಯಂದಿರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಯೋ ಸಹಜ ಕಾಯಿಲೆಗೆ ಬಳಲಿದ್ದ ಜಯರಾಂ ಅವರು ಶ್ರೀರಂಗಪಟ್ಟಣ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಐದು ದಶಕಗಳಿಗೂ ಹೆಚ್ಚು ಕಾಲ ಶ್ರೀರಂಗಪಟ್ಟಣದ ರಾಜಕಾರಣದಲ್ಲಿ ಸಕ್ರೀಯವಾಗಿದ್ದರು.

ಶ್ರೀರಂಗಪಟ್ಟಣ ತಾಲೂಕಿನ ರಾಜಕೀಯ ನಾಯಕರಾದ ಚುಂಚೇಗೌಡರ ಕುಟುಂಬಕ್ಕೆ ಆಪ್ತರಾಗಿದ್ದರು. ಅಲ್ಲದೇ ಶ್ರೀಕಂಠಯ್ಯ, ಪಾರ್ವತಮ್ಮ ಶ್ರೀಕಂಠಯ್ಯ ಹಾಗೂ ಮಾಜಿ ಸಂಸದ ಜಿ. ಮಾದೇಗೌಡರು ಸೇರಿದಂತೆ ಅನೇಕರಿಗೆ ರಾಜಕೀಯದಲ್ಲಿ ಅಪ್ತರಾಗಿದ್ದರು.

ಸಂತಾಪ
ಜಯರಾಂ ನಿಧನಕ್ಕೆ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ , ಜೆಡಿಎಸ್ ನಾಯಕ ಎಂ ಸಂತೋಷ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿ, ಆತ್ಮಕ್ಕೆ ಶಾಂತಿ ಕೋರಿ, ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ.

Share This Article
Leave a comment