ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಒಬ್ಬರು ದುರಂತ ಸಾವು ಕಂಡಿದ್ದಾರೆ.
ಫಾರೆಸ್ಟ್ ವಾಚಾರ್ ಗುರುರಾಜ್ ಎಂಬುವವರೇ ಸಾವನ್ನಪ್ಪಿದ್ದಾರೆ.
ನಾಗರಹೊಳೆ ರೇಂಜ್ ವ್ಯಾಪ್ತಿಯಲ್ಲಿ ಇಂದು ಈ ದುರಂತ ಜರುಗಿದೆ. ಅರಣ್ಯ ಗಸ್ತಿನ ಸಂದರ್ಭದಲ್ಲಿ ಗುರುರಾಜ್ ಮೇಲೆ ಕಾಡಾನೆ ದಾಳಿ ಮಾಡಿದೆ.
ಈ ಕಾಡಾನೆ ದಾಳಿಗೆ ತತ್ತರಿಸಿ, ಭೀಕರವಾಗಿ ತುಳಿತಕ್ಕೆ ಒಳಗಾಗಿ ಗುರುರಾಜ್ ಸಾವನ್ನಪ್ಪಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫಾರೆಸ್ಟ್ ವಾಚರ್ ಆಗಿ ಗುರುರಾಜ್ ಸೇವೆ ಸಲ್ಲಿಸುತ್ತಿದ್ದರು.