Trending

ಪರವಾಗಿಲ್ಲ ಬಿಡಿ

ನೀವು ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಲಿಲ್ಲ
ಪರವಾಗಿಲ್ಲ ಬಿಡಿ:
ನಿಮಗದರಿಂದೇನು ಲಾಭವಿರಲಿಲ್ಲ.

ನೀವು ಎನ್ಆರ್‌ಸಿ ವಿರೋಧಿಸಿ ಪ್ರಜಾತಾಂತ್ರಿಕ ಸತ್ಯಾಗ್ರಹಿಗಳಿಗೆ ಜೊತೆಯಾಗಲಿಲ್ಲ
ಪರವಾಗಿಲ್ಲ ಬಿಡಿ:
ಅವರಿಂದ ನಿಮಗೇನೂ ಅನುಕೂಲವಿರಲಿಲ್ಲ.

ನೀವು ಗುಂಪು ಹತ್ಯೆಗೀಡಾದವರ ದುಃಖತಪ್ತ
ಕುಟುಂಬಗಳ ಜೊತೆಗೂ ನಿಲ್ಲಲಿಲ್ಲ.
ಪರವಾಗಿಲ್ಲ ಬಿಡಿ;
ಅವರಿಗಾಗಿ ನಿಮ್ಮಲ್ಲಿ
ಕರುಣೆ ಇರಲಿಲ್ಲ.

ನೀವು ಕಣ್ಗಾವಲಿನ ಕಾಶ್ಮೀರದ ಹಿಂದೂಸ್ತಾನಿಗಳ ಜೊತೆ ನಿಲ್ಲಲಿಲ್ಲ
ಪರವಾಗಿಲ್ಲ ಬಿಡಿ;
ಅವರನ್ನು ನಮ್ಮವರೆಂದು ನೀವು ಭಾವಿಸಿದ್ದಾದರೂ ಎಂದು?

ನೀವು ಅತ್ಯಾಚಾರಿಗಳ ವಿರುದ್ದವಾದರೂ ಎದ್ದು ನಿಲ್ಲಲಿಲ್ಲ
ಪರವಾಗಿಲ್ಲ ಬಿಡಿ:
ಅತ್ಯಾಚಾರಕ್ಕೊಳಗಾದ ಯಾವೊಬ್ಬ ಹೆಣ್ಣುಮಗಳೂ ನಿಮ್ಮ ಸಂಬಂಧಿಗಳಾಗಿರಲಿಲ್ಲ

ನೀವು ಖಾಸಗೀಕರಣಕ್ಕೆ ಸಿಕ್ಕು ಉಸಿರುಗಟ್ಟುತ್ತಿರುವ
ಸರ್ಕಾರಿ ನೌಕರರ ಪರ ನಿಲ್ಲಲಿಲ್ಲ
ಪರವಾಗಿಲ್ಲ ಬಿಡಿ:
ಅವರಲ್ಲಿ ಯಾರೊಬ್ಬರೂ ನಿಮ್ಮ ಕುಟುಂಬದ ಸದಸ್ಯರಾಗಿರಲಿಲ್ಲ.!

ಕಳೆದ ಏಳು ವರ್ಷಗಳಿಂದ ಕ್ಷಣ ಕ್ಷಣವೂ ದೇಶದ ನೌಕೆ ಮುಳುಗುತ್ತಿದೆ
ಪರವಾಗಿಲ್ಲ ಬಿಡಿ:
ನಿಮಗೆ ಇದೊಂದು ಸವಾಲು ಎಂದು ಅನಿಸುತ್ತಲೇ ಇಲ್ಲ

ಕೃಷಿ ದೇಶದ ಆರ್ಥಿಕತೆಯ ಬೆನ್ನೆಲು
ರೈತರು ಕಳೆದ ಎರಡು ತಿಂಗಳಿನಿಂದ ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ
ಮನೆ, ಹೊಲಗದ್ದೆ ಬಿಟ್ಟು
ಹಕ್ಕಿಗಾಗಿ ಹೋರಾಡುತ್ತಿದ್ದಾರೆ
ಇವತ್ತಾದರೂ ನೀವು ಅವರ ಜೊತೆಗಿರಬೇಕಿತ್ತಲ್ಲ..?!

ಈ ಬೆಳಗ್ಗೆ ನೀವು ತಿಂದ ರೊಟ್ಟಿ,ಅನ್ನ ಇದಾವುದೂ ಕಾರ್ಖಾನೆಯ,
ಅಂಬಾನಿ ಅದಾನಿಯ ದೌಲತ್ತಿನಿಂದ ಸೃಷ್ಟಿಸಿದ್ದಲ್ಲ,
ರೈತರ ಕಣ್ಣೀರು, ಬೆವರು ಶ್ರಮದಿಂದ ಬೆಳೆದದ್ದು.
ಈಗಲೂ ನೀವು ಅನ್ನದಾತನ ಜೊತೆ ನಿಲ್ಲದಿದ್ದರೆ
ಸ್ಪಷ್ಟವಾಯಿತು ಬಿಡಿ….,
ನೀವು ಮನುಷ್ಯತ್ವದ ವಿರೋಧಿಗಳೆಂದು,
ನೀವು ಅಂಧಭಕ್ತರೆಂದು,
ಈ ದೇಶ ಮುಳುಗುತ್ತಿರುವುದಕ್ಕೆ ನೀವೇ ಕಾರಣರೂ ಎಂದು.

ಮೂಲ: ಹಿಂದಿ
ಭಾವಾನುವಾದ; ಎನ್.ರವಿಕುಮಾರ್ ಟೆಲೆಕ್ಸ್

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024