January 30, 2026

Newsnap Kannada

The World at your finger tips!

gubbi

ಕೌಟುಂಬಿಕ ಕಲಹ : ನೀರಾವರಿ ಇಲಾಖೆಯ AEE ಸೇರಿ ಕುಟುಂಬದ ಮೂವರು ಆತ್ಮಹತ್ಯೆ

Spread the love

ಒಂದೇ ಕುಟುಂಬದ ಮೂವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ.

ನಿನ್ನೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ನೀರಾವರಿ ಇಲಾಖೆ ಎಇಇ ರಮೇಶ್ (55), ಪತ್ನಿ ಮಮತಾ (45) ಮಗಳು ಶುಭ (25) ಎಂದು ಗುರುತಿಸಲಾಗಿದೆ.

ಒಮ್ನಿ ಕಾರಿನಲ್ಲಿ ಬಂದು ಇಡೀ ಕುಟುಂಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಗುಬ್ಬಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಬಿ. ಕ್ರಾಸ್ ಸಮೀಪದ ಬಿಳಿಗೆರೆ ಗ್ರಾಮದಲ್ಲಿ ಈ ಕುಟುಂಬ ವಾಸವಿತ್ತು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

error: Content is protected !!