February 18, 2026

Newsnap Kannada

The World at your finger tips!

central

Photo Credits: PTI

ಉದ್ಯೋಗ ನೇಮಕಾತಿಗೆ ಯಾವುದೇ ತಡೆ, ನಿರ್ಬಂಧವಿಲ್ಲ – ಕೇಂದ್ರ ವಿತ್ಯ ಸಚಿವಾಲಯ

Spread the love

ನವದೆಹಲಿ.
ಕೇಂದ್ರ ಸರ್ಕಾರ ಉದ್ಯೋಗ ನೇಮಕಾತಿಗೆ ತಡೆ ನೀಡಿದೆ ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪವನ್ನು ಕೇಂದ್ರ ರಾಜ್ಯ ಖಾತೆ ವಿತ್ತ ಸಚಿವಾಲಯ ತಳ್ಳಿ ಹಾಕಿದೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಆದೇಶ ಬಿಡುಗಡೆ ಮಾಡಿ, ನೇಮಕಾತಿ ಸಂಬಂಧಿಸಿದಂತೆ ಯಾವುದೇ ನಿರ್ಬಂಧ ಹೇರಿಲ್ಲ. ಯಾವುದೇ ತಡೆಯಾಜ್ಞೆಯನ್ನೂ ನೀಡಿಲ್ಲ. ನೇಮಕಾತಿಯ ಸಾಮಾನ್ಯ ಪ್ರಕ್ರಿಯೆಗಳನ್ನು ಸರ್ಕಾರಿ ಸಂಸ್ಥೆಗಳಾದ ಯುಪಿಎಸ್, ರೈಲ್ವೆ ಹಾಗೂ ಉದ್ಯೋಗ ನೇಮಕಾತಿ ಮಂಡಳಿಗಳು ಹುದ್ದೆಗಳನ್ನು ಭರ್ತಿ ಮಾಡುತ್ತಿವೆ. ಸೆ. 4ರ ಆದೇಶದಲ್ಲಿ ಸಾಮಾನ್ಯ ನೇಮಕಾತಿಯ ಪ್ರಕ್ರಿಯೆಗೆ ಯಾವುದೇ ಧಕ್ಕೆ ಯಾಗದಂತೆ ಅನಗತ್ಯವಾದ ಹುದ್ದೆಗಳ ಸೃಷ್ಠಿಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

error: Content is protected !!