ದೆಹಲಿಯ ರಾಜ್ಯಸಭೆಯಲ್ಲಿ ರೈತರ ಸಬಲೀಕರಣ ಮತ್ತು ಸಂರಕ್ಷಣೆ, ರೈತರ ವ್ಯಾಪರ ಮತ್ತು ವಾಣಿಜ್ಯ ಕುರಿತು ಕೃಷಿ ಮಸೂದೆಗಳನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೋಮವಾರ ಮಂಡನೆ ಮಾಡಿದರು.
ಇದೇ ವೇಳೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಎರಡು ಮಸೂದೆಗಳನ್ನು ವಿರೋಧಿಸಿ, ಆಯ್ಕೆ ಸಮಿತಿಗೆ ನೀಡಲು ಹೇಳಿದವು.
ಕೇಂದ್ರ ಸರ್ಕಾರವು ಪರಿಚಯಿಸಿರುವ ಕೃಷಿ ಮಸೂದೆಗಳು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ವಿರೋಧ ಪಕ್ಷಗಳ ಹೇಳಿದರೆ, ಅಂಗೀಕಾರದ ಸಮಯದಲ್ಲಿ ಗೊಂದಲ ಸೃಷ್ಠಿಸಿದ ವಿರೋಧ ಪಕ್ಷಗಳ ನಡೆ ‘ಪ್ರಜಾಪ್ರಭುತ್ವಕ್ಕೆ’ ವಿರುದ್ಧವಾದದ್ದು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಆದರೆ ಇಂದು ರಾಜ್ಯಸಭೆಯಲ್ಲಿ ಉಪಸಭಾಪತಿ ಹರಿವಂಶ್ ಮಸೂದೆಗಳನ್ನು ಅಂಗೀಕರಿಸುವಂತೆ ಹೇಳಿದಾಗ ತೃಣಮೂಲ ಕಾಂಗ್ರೆಸ್ ನ ಡರೆಕ್ ಒಬ್ರಿಯನ್ ಆಕ್ರೋಶಗೊಂಡು ಉಪಸಭಾಪತಿ ಎದುರಿಗೆ ರೂಲ್ಸ್ ಪುಸ್ತಕವನ್ನು ಹರಿದು ಹಾಕಿದ್ದಾರೆ. ಇದನ್ನು ಅನುಚಿತ ವರ್ತನೆ ಎಂದು ಹೇಳಿ ಅಂಗೀಕಾರಗೊಂಡ ಮಸೂದೆಗಳನ್ನು ವಿರೋಧಿಸಿ ಗೊಂದಲ ಸೃಷ್ಠಿಸಿದ ಕಾರಣಕ್ಕೆ ಎಂಟು ಜನ ಸಂಸದರನ್ನು ರಾಜ್ಯ ಸಭಾ ಸಭಾಪತಿಯವರು ಒಂದು ವಾರಗಳ ಕಾಲ ಅಮಾನತು ಮಾಡಿದ್ದಾರೆ. ಆದರೆ ಅಮಾನತುಗೊಂಡ ಸಂಸದರು ಹೊರಹೋಗಲು ನಿರಾಕರಿಸಿದರು. ಹೀಗೆ ಕೆಲಹೊತ್ತು ರಾಜ್ಯ ಸಭೆ ಗೊಂದಲದ ಗೂಡಾಗಿತ್ತು.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment