ಅಕ್ರಮದ ಹಿನ್ನೆಲೆ:
ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ಇಂಜಿನಿಯರ್ ಕಚೇರಿಯ ಮೇಲೆ ದಾಳಿ ಮಾಡಿರುವ ಇಡಿ, 2016 ರಿಂದ 2019ರ ಅವಧಿಯಲ್ಲಿ ನಡೆದ ವೈಟ್ ಟಾಪಿಂಗ್ ಮತ್ತು ಕೊಳವೆ ಬಾವಿ ಕೊರೆಯುವ ಕೆಲಸಗಳಿಗೆ ಸಂಬಂಧಿಸಿದ ಅಕ್ರಮದ ದಾಖಲೆಗಳನ್ನು ಪರಿಶೀಲಿಸುತ್ತಿದೆ. 2016ರಲ್ಲಿ ಈ ಅಕ್ರಮ ನಡೆದಿರುವುದು ಎಂಬ ಮಾಹಿತಿ ಸಿಕ್ಕಿದ್ದು, 2021ರಲ್ಲಿ ಈ ಪ್ರಕರಣವನ್ನು ಇಡಿಯಲ್ಲಿ ದಾಖಲಿಸಲಾಗಿತ್ತು.
ತಪಾಸಣೆ ಪ್ರಕ್ರಿಯೆ:
ಇಡಿಯ 7 ಸದಸ್ಯರ ತಂಡ ಬೆಳಗ್ಗೆ 11 ಗಂಟೆಯಿಂದ ಬಿಬಿಎಂಪಿ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದೆ. ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಇಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆಯುಕ್ತರ ಆಡಳಿತದಲ್ಲಿ ಆರೋಪ:
2020ರ ಸೆಪ್ಟೆಂಬರ್ನಿಂದ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಆಡಳಿತ ನಡೆಯುತ್ತಿದೆ. 2022ರಲ್ಲಿ ಈ ಅಕ್ರಮ ಸಂಬಂಧ ಇಡಿಯಿಂದ ಬಿಬಿಎಂಪಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. 2019ರಲ್ಲಿ ಆರ್ಟಿಐ ಕಾರ್ಯಕರ್ತ ಮತ್ತು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ನೀಡಿದ ದೂರು ಆಧಾರದ ಮೇಲೆ, ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಪರಿಶೀಲಿಸುತ್ತಿದೆ.
ಅಕ್ರಮದ ವಿವರಗಳು:
ಇದನ್ನು ಓದಿ -ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ
ಭ್ರಷ್ಟಾಚಾರದ ಆರೋಪ:
2016 ರಿಂದ 2018ರ ನಡುವೆ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಆಯುಕ್ತರು, 5 ಜಂಟಿ ಆಯುಕ್ತರು, 5 ಮುಖ್ಯ ಇಂಜಿನಿಯರ್ ಮತ್ತು 40ಕ್ಕೂ ಹೆಚ್ಚು ಅಧಿಕಾರಿಗಳನ್ನು ದೂರುದಲ್ಲಿ ಉಲ್ಲೇಖಿಸಲಾಗಿದೆ. ಇಡಿ ಈಗ ಈ ಅಕ್ರಮ ಸಂಬಂಧ ತನಿಖೆ ಮುಂದುವರಿಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು