February 21, 2026

Newsnap Kannada

The World at your finger tips!

kamal panth

ಕರ್ತವ್ಯ ಲೋಪ – ಆರ್ ಟಿ ನಗರ ಇನ್ಸ್ ಪೆಕ್ಟರ್ , ಎಸ್ಐ ಸಸ್ಪೆಂಡ್ : ಡಿಸಿಪಿಗೆ ಶೋಕಾಸ್ ನೋಟಿಸ್

Spread the love

ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಆರ್ ಟಿ ನಗರ ಇನ್ಸ್ ಪೆಕ್ಟರ್ , ಎಸ್ಐ ಸಸ್ಪೆಂಡ್ ಮಾಡಲಾಗಿದೆ . ಆಗ್ನೇಯ ವಿಭಾಗದ ಡಿಸಿಪಿಗೆ ಶೋಕಾಸ್ ನೋಟಿಸ್ ಜಾರಿ ಕಮೀಷನರ್ ಆದೇಶ ಮಾಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದ ಬಳಿ ಬಂದೋಬಸ್ತಿನಲ್ಲಿದ್ದ ಪೇದೆಗಳಿಬ್ಬರು ಡ್ರಗ್ಸ್ ಪೆಡ್ಲರ್ ಜೊತೆ
ವ್ಯಾಪಾರ ವಹಿವಾಟು ಪತ್ತೆ ಹಚ್ಚುವಲ್ಲಿ ಕತ೯ವ್ಯ ಲೋಪ ಮಾಡಿದ ಆರೋಪದ ಮೇಲೆ
ಆರ್ ಟಿ ನಗರ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಹಾಗೂ ಎಸ್ಐ ಅವರನ್ನು ಪೋಲಿಸ್ ಕಮೀಷನರ್ ಕಮಲ್ ಪಂತ್ ಅಮಾನತ್ತುಗೊಳಿಸಿದ್ದಾರೆ . ಡಿಸಿಪಿ ಜೋಷಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಡ್ರಗ್ಸ್ ಪೆಡ್ಲರ್ ಜೊತೆ ನೇರ ಸಂಪರ್ಕ ಹೊಂದಿ ಸಿಎಂ ನಿವಾಸದ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಪೇದೆಗಳಾದ ಶಿವಕುಮಾರ್ ಹಾಗೂ ಸಂತೋಷ್ ಅವರನ್ನು ನಿನ್ನೆ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಇಂದು ಇಬ್ಬರೂ ಪೇದೆಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

error: Content is protected !!