February 22, 2026

Newsnap Kannada

The World at your finger tips!

224 ಶಾಸಕರ ಏಕಪತ್ನಿ ವ್ರತದ ಕುರಿತು ತನಿಖೆ ಮಾಡಿ: ಸಚಿವ ಸುಧಾಕರ ಬಹಿರಂಗ ಸವಾಲು

Spread the love

ಸಿದ್ದು, ಡಿಕೆಶಿ, ಹೆಚ್ ಡಿಕೆ ಇವರೆಲ್ಲ ಏಕಪತ್ನಿ ವ್ರತಸ್ಥರೇ? ತನಿಖೆಯಾಗಲಿ ಎಂಬ ಒತ್ತಾಯ ಸಚಿವರದ್ದು

ರಾಜ್ಯದ 224 ಶಾಸಕರ ಏಕಪತ್ನಿ ವ್ರತದ ಬಗ್ಗೆ ತನಿಖೆ ಮಾಡಿ ಎಂದು ಸಚಿವ ಸುಧಾಕರ ಬಹಿರಂಗ ಸವಾಲು ಹಾಕಿದ್ದಾರೆ.

ತೀವ್ರ ಸದ್ದು ಮಾಡುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರಿಗೆ ಈ ಛಾಲೆಂಜ ಮಾಡಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ, ರಮೇಶ್ ಕುಮಾರ್ ಸೇರಿದಂತೆ ಎಲ್ಲರ ವಿರುದ್ಧ ತನಿಖೆಯಾಗಲಿ, ಯಾರ ಬಂಡವಾಳ ಏನೆಂಬುದು ರಾಜ್ಯದ ಜನತೆಗೆ ತಿಳಿಯಲಿ ಎಂದರು.

ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿದ ಸಚಿವ ಸುಧಾಕರ್, ಸಿಡಿ ವಿಚಾರವಾಗಿ ಶ್ರೀರಾಮಚಂದ್ರನಂತೆ, ಸತ್ಯಹರಿಶ್ಚಂದ್ರರಂತೆ ಇಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಯಾರೆಲ್ಲ ಮಾತನಾಡುತ್ತಿದ್ದಾರೆ ಅವರೆಲ್ಲರಿಗೂ ಓಪನ್ ಚಾಲೇಂಜ್ ಮಾಡುತ್ತೇನೆ. ಅವರುಗಳು ಇದಕ್ಕೆ ಒಪ್ಪಿಕೊಳ್ಳುತ್ತಾರೆಯೇ? ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ,ಡಿಕೆಶಿ, ಕುಮಾರಣ್ಣ, ರಮೇಶ್ ಕುಮಾರ್ ಇವರೆಲ್ಲ ಇವರೆಲ್ಲರೂ ಸತ್ಯ ಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತವನ್ನು ಮಾಡುತ್ತಿದ್ದಾರಾ? ಇವರೆಲ್ಲ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರ ವಿರುದ್ಧ ಮಾತ್ರವಲ್ಲ ನನ್ನನ್ನೂ ಸೇರಿದಂತೆ ಎಲ್ಲಾ 224 ಶಾಸಕರ ವಿರುದ್ಧವೂ ತನಿಖೆಯಾಗಲಿ ಎಂದು ಹೇಳಿದರು

ಸಿಎಂ ಆಗಿದ್ದಾಗ ಯಾರು ಏನೇನು ಮಾಡಿದರು ? ಯಾರಿಗೆಲ್ಲ ಅನೈತಿಕ ಸಂಬಂಧಗಳಿವೆ? ಯಾರ ವಿಚಾರ ಏನು ಎಂಬುದು ತನಿಖೆಯಾಗಲಿ. ತನಿಖೆ ಬಳಿಕ ಯಾರ ಬಂಡವಾಳ ಏನು ಎಂಬುದು ಗೊತ್ತಾಗಲಿದೆ ಎಂದರು.

error: Content is protected !!