January 28, 2026

Newsnap Kannada

The World at your finger tips!

medical , camp , children

ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ವೈದ್ಯರು ಸಜ್ಜು

Spread the love

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಸದಸ್ಯರು ಸೆಪ್ಟೆಂಬರ್‌ ೨೪ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ.

ಗುತ್ತಿಗೆ ಪದ್ದತಿ ರದ್ದು, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ಮುಂತಾದ ಬೇಡಿಕೆಗಳನ್ನು ಸರ್ಕಾರ ಈಡೇರಿಲ್ಲ. ನಾವು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದರೂ ಸರ್ಕಾರ ಎಚ್ಚೆತ್ತಿಲ್ಲ. ಹಾಗಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ. ಪ್ರತಿಭಟನೆಯ ವೇಳೆ ಕೋವಿಡ್ – ೧೯ಕ್ಕೆ ಸಂಬಂಧಿಸಿದಮನತೆ ಯಾವುದೇ ವರದಿಯನ್ನೂ ನೀಡುವದಿಲ್ಲ ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜೇಶ್ ತಿಳಿಸಿದರು.

ಕೊರೋನಾದ ಪರಿಣಾಮವಾಗಿ ದೇಶ, ರಾಜ್ಯದ ಆರ್ಥಿಕತೆಗಳು ಕುಂಟುತ್ತ ಸಾಗಿವೆ. ಸೋಂಕಿತರಲ್ಲಿ ಅನೇಕರು ಸಾವಿಗೀಡಾಗುತ್ತಿದ್ದಾರೆ. ಆದಷ್ಟು ಬೇಗ ಸರ್ಕಾರ ವೈದ್ಯರಿಗೆ ಅನುಕೂಲವಾಗುಂಥಹ ಯೋಜನೆ ರೂಪಿಸಬೇಕಾಗಿದೆ.

error: Content is protected !!