ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ಪಟಾಕಿ ನಿಷೇಧದಿಂದಾಗಿ ನಿಶಬ್ಧ ದೀಪಾವಳಿ ಎಂಬಂತಾಗಿದೆ.
ಪಟಾಕಿಯ ಅಬ್ಬರ, ಕರ್ಕಶವಾದ ಶಬ್ದಕ್ಕೆ ಕಡಿವಾಣ ಬಿದ್ದಿದೆ. ದೀಪಾವಳಿ ಬೆಳಗುವ ಹಣತೆಯ ಬೆಳಕಿನ ಹಬ್ಬ. ಕೊರೋನಾ ಭಯ, ಭೀತಿಯಿಂದಾಗಿ ಮುಂಜಾಗ್ರತ ಕ್ರಮ ಕೈಗೊಂಡ ಸರ್ಕಾರ ಪಟಾಕಿ ಸಿಡಿಸುವುದರಿಂದ ಆಗುವ ಪರಿಣಾಮಗಳನ್ನು ಚಿಂತನೆ ಮಾಡಿ ಪಟಾಕಿ ಹೊಡೆಯುವುದನ್ನೇ ನಿಷೇಧ ಮಾಡಿರುವುದು ಒಳ್ಳೆಯದೇ ಆದರೂ, ಸಂಪ್ರದಾಯವಾಗಿ ಬಂದಿದ್ದ ಪಟಾಕಿ ಸಂಭ್ರಮವು ಈ ಬಾರಿ ಮೌನಕ್ಕೆ ಜಾರಿದಂತಾಗಿದೆ.
ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಹೆಚ್ಚಿನ ಬೆಳಕು ಕಡಿಮೆ ಶಬ್ದದೊಂದಿಗೆ ಶನಿವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿ ಬಳಕೆ ಮಾಡಬೇಕಾಗಿತ್ತು. ಆದರೆ ಹಸಿರು ಪಟಾಕಿ ಯಾವುದು ? ಅದರಿಂದ ಯಾವ ಪ್ರಮಾಣದ ಪರಸರ ಮಾಲಿನ್ಯ ಉಂಟಾಗುತ್ತದೆ ಎಂಬುದು ನಿರ್ಧಾರ ಆಗದೇ ಗೊಂದಲ ದಲ್ಲಿ ಹಬ್ಬದ ಮೊದಲ ದಿನ ಅಂತ್ಯ ವಾಯಿತು.
ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾಹಾ ನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳ ತಂಡವು ಪಟಾಕಿ ಅಂಗಡಿಗಳ ಮೇಲೆ ದಾಳಿ ಡಂ ಢಮಾರ್ ಪಟಾಕಿ ಗಳನ್ನು ವಶಪಡಿಸಿಕೊಂಡ ಪ್ರಕರಣಗಳು ವರದಿಯಾಗಿವೆ
ಆದರೂ ಕೆಲವು ಕಡೆ ಸಣ್ಣ ಪುಟ್ಟ ಪಟಾಕಿ ಗಳನ್ನು ಹೊಡೆದಿದ್ದಾರೆ. ಮತ್ತೆ ಕೆಲವು ಕಡೆ ಒಲವಿಲ್ಲದಿದ್ದರೂ ಅನಿವಾರ್ಯ ಎಂಬಂತೆ ಕೆಲವೆಡೆ ಪಟಾಕಿ ಸಂಪ್ರದಾಯ ರೂಪವಾಗಿ ಬಳಸಿದ್ದು ಕಂಡು ಬಂತು.ಅನೇಕರು ಮಾತ್ರ ಮನೆಗಳ ಮುಂದೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಲಾಯಿತು.
ರಾಜ್ಯ ಸರ್ಕಾರದ ದಿಡೀರ್ ನಿರ್ಧಾರದಿಂದ ಕಂಗಾಲಾಗಿದ್ದು ಪಟಾಕಿ ವ್ಯಾಪಾರಿಗಳು. ಈ ವರ್ಷ ವ್ಯಾಪಾರಕ್ಕೆ ಅಡ್ಡಿಮಾಡಬೇಡಿ. ಮುಂದಿನ ವಷ೯ದಿಂದ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳನ್ನು ಪರಿಪರಿಯಿಂದ ಬೇಡಿಕೊಂಡ ದೃಶ್ಯಗಳನ್ನು ಹಲವು ಕಡೆ ಕಾಣಬಹುದಿತ್ತು.
ಸಂಪ್ರದಾಯಸ್ಥರು ಮನೆಯಲ್ಲಿ ಸಿಹಿ ಮಾಡಿ ಹಬ್ಬ ಆಚರಿಸಿದರು. ಒಟ್ಟಿನಲ್ಲಿ ಈ ವರ್ಷ ಕೊರೊನಾ ಕರಿ ನೆರಳಿನಲ್ಲೂ ಬೆಳಕಿನ ಸಂಭ್ರಮಕ್ಕೆ ಚ್ಯುತಿ ಬಾರದಂತೆ ನರಕ ಚತುರ್ದಶಿ ನಡೆಯಿತು.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment