March 14, 2025

Newsnap Kannada

The World at your finger tips!

sose

ಅತ್ತೆ ಮಾವನ ಮೇಲೆ ಸಿಟ್ಟು , ಅಡಿಕೆ ತೋಟ ಸರ್ವನಾಶ ಮಾಡಿದ ಸೊಸೆ.

Spread the love

ದಾವಣಗೆರೆ : ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ಅತ್ತೆ, ಮಾವನ ಮೇಲಿನ ಸಿಟ್ಟಿನಿಂದ ಸೊಸೆಯೊಬ್ಬಳು ಅಡಿಕೆ ಮರಗಳನ್ನೇ ಕಡಿದು ಹಾಕಿದ ಘಟನೆ ನಡೆದಿದೆ.

ಅಡಿಕೆ ಮರಗಳನ್ನು ಕಡಿದು ಹಾಕಿದ ರೂಪಾ ಕುಮಾರಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಚಿದಾನಂದ ಸ್ವಾಮಿ ದಂಪತಿಯಹಿರಿಯ ಪುತ್ರ ಕುಮಾರಸ್ವಾಮಿಯನ್ನು ರೂಪಾಳೊಂದಿಗೆ ಮದುವೆ ಮಾಡಿಸಲಾಗಿದ್ದು , ಹಲವಾರು ಬಾರಿ ಆಸ್ತಿಯಲ್ಲಿ ಪಾಲು ಕೇಳಿತ್ತಿದ್ದ ಸೊಸೆ ರೂಪಾ ಅತ್ತೆ, ಮಾವನ ಮೇಲಿದ್ದ ಸಿಟ್ಟಿಗೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ನಾಶ ಮಾಡಿದ್ಧಾಳೆ.

ವಯಸ್ಸಾಗಿರುವ ನಮ್ಮನ್ನ ಸರಿಯಾಗಿ ನೋಡಿಕೊಳ್ಳದೆ ಸೊಸೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಮತ್ತು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂದು ಆರೋಪಿಸಿ ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಿದಾನಂದ ಸ್ವಾಮಿಯವರು ದೂರು ದಾಖಲಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!