ಗ್ರಾಮ ಪಂಚಾಯತಿ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಪ್ರತಿ ಹಳ್ಳಿಗಳಲ್ಲೂ ಅಬ್ಬರ ಪ್ರಚಾರ , ತಂತ್ರಗಾರಿಕೆ ಭರದಿಂದ ಸಾಗಿದೆ.
ರಾಜ್ಯದಲ್ಲಿ 3020 ಗ್ರಾಪಂಗಳಿಗೆ ಡಿಸೆಂಬರ್ 22 ರಂದು ಚುನಾವಣೆ ನಡೆಯಲಿದೆ. 1, 06, 071 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 47, 581 ಮಂದಿಯನ್ನು ಆಯ್ಕೆ ಮಾಡಬೇಕಿದೆ. ಈ ಪೈಕಿ 4375 ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇವಿಷ್ಟು ಮೊದಲ ಹಂತದ ಚುನಾವಣೆಯ ರಾಜ್ಯದ ಅಂಕಿ ಅಂಶಗಳು.
ರಾಜಕೀಯ ದಿಂದ ಕುಲಗೆಟ್ಟು ಹೋದ ಹಳ್ಳಿಗಳು:
ರಾಜ್ಯ ರಾಜಕಾರಣ ಮಾತ್ರವಲ್ಲ ಗ್ರಾಮ ಪಂಚಾಯತಿ ಹಂತದಿಂದಲೂ ಈ ರಾಜಕೀಯ ಅವ್ಯವಸ್ಥೆ, ದೊಂಬರಾಟ ಹಾಗೂ ಅಧಿಕಾರದಾಹ ಎಲ್ಲವೂ ಹಾಸುಹೊಕ್ಕಾಗಿವೆ.
ಕುಲಗೆಟ್ಟಿರುವುದು ಕೇವಲ ರಾಜಕಾರಣ ಮಾತ್ರವಲ್ಲ ಮತದಾರನಿಂದ ಹಿಡಿದು ರಾಜಕೀಯ ವ್ಯಕ್ತಿ ಗಳು, ಪಕ್ಷಗಳು. ನಾಯಕರು, ಕಾರ್ಯಕರ್ತರು ಹೀಗೆ ಇಡೀ ವ್ಯವಸ್ಥೆ ಬರು , ಬರುತ್ತಾ ಅಧಃಪತನದ ಹಾದಿ ಹಿಡಿದಿದೆ.
ಚುನಾವಣೆಯ ವ್ಯವಸ್ಥೆ ಯಲ್ಲಿ ಸುಧಾರಣೆಗಳು ಬರುತ್ತಲೇ ಇದೆ. ಆದರೆ ಹಣ, ಹೆಂಡದ ಮೂಲಕ ಚುನಾವಣೆ ಗೆಲ್ಲುವ ತಂತ್ರ- ಕುತಂತ್ರಗಳಿಗೆ ಕಡಿವಾಣ ಹಾಕುವುದು ಮಾತ್ರ ಯಾರಿಗೂ ಸಾಧ್ಯವಾಗಿಲ್ಲ ಎಂಬುದನ್ನು ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಗ್ರಾ ಪಂ ಚುನಾವಣೆ ರೀತಿ ನೀತಿಗಳನ್ನು ನೋಡಿದರೆ ಗೊತ್ತಾಗುತ್ತದೆ.
ಮನೆ, ಮನಸ್ಸು ಹಾಳು ಮಾಡಿರುವ ವ್ಯವಸ್ಥೆ:
ಗ್ರಾಮ ಪಂಚಾಯತಿ ಚುನಾವಣೆಗಳು ಹಳ್ಳಿಗರ ಮನೆ, ಮನಸ್ಸನ್ನು ಕೆಡಿಸಿ ಇಟ್ಟಿವೆ. ಜನ ಹಣಕ್ಕಾಗಿ ತಮ್ಮನ್ನು ತಾವೇ ಹರಾಜು ಹಾಕಿಕೊಳ್ಳುವ ವ್ಯವಸ್ಥೆಗೆ ತಂದು ನಿಲ್ಲಿಸಿದೆ ಈ ಪಂಚಾಯತಿ ಚುನಾವಣೆಗಳು.
ಉತ್ತಮ ಅಭ್ಯರ್ಥಿ ಆಯ್ಕೆ ನಮ್ಮ ಹಕ್ಕು
ನಿಜವಾಗಿಯೂ ಜನ ಸೇವೆ ಮಾಡುವ ಉದ್ದೇಶ ಇದ್ದರೆ ಮೊದಲು ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿ
ಗೌರೀಶ್ ಟಿ.ಎಸ್
ತಿಪ್ಪೇನಹಳ್ಳಿ
.
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment