ಅ.16 ರಂದು ಎಂ.ಪಿ. ಶಂಕರಪ್ಪ ಎಂಬುವವರಿಗೆ ವಾಟ್ಸಾಪ್ ಮೂಲಕ ಮಹಾರಾಷ್ಟ್ರದ ಪೊಲೀಸ್ ಎಂದು ಪರಿಚಯಿಸಿದ ವಂಚಕರು, ‘ನಿಮ್ಮ ಹೆಸರು ಮಾನವ ಕಳ್ಳಸಾಗಾಣೆ ಪ್ರಕರಣದಲ್ಲಿ ಸಂಶಯಿತರ ಪಟ್ಟಿಯಲ್ಲಿದೆ, ಬಂಧನ ತಪ್ಪಿಸಲು ನಿಮಗೆ ಅವಕಾಶ ನೀಡಲಾಗುತ್ತಿದೆ’ ಎಂದು ಹೆದರಿಸಿದ್ದಾರೆ.
ಬಂಧನದಿಂದ ತಪ್ಪಿಸಿಕೊಳ್ಳಲು ನಿಮ್ಮ ಮನೆಯ ಮತ್ತು ಬ್ಯಾಂಕ್ ಖಾತೆಯ ದಾಖಲೆಗಳನ್ನು ತೋರಿಸಲು ಸೂಚನೆ ನೀಡಿದಾಗ, ಶಂಕರಪ್ಪ ಅವರು ಎಲ್ಲಾ ದಾಖಲಾತಿಗಳನ್ನು ವಿಡಿಯೋ ಕರೆಯಲ್ಲಿಯೇ ತೋರಿಸಿದ್ದಾರೆ. ಕಳ್ಳರು ನಂತರ ‘ನಿಮ್ಮ ಖಾತೆಯಲ್ಲಿನ ಹಣವನ್ನು ಸರ್ಕಾರದ ಖಾತೆಗೆ ಅಲ್ಪಾವಧಿಗೆ ಜಮಾ ಮಾಡಿ, ಬಳಿಕ ವಾಪಸ್ ಪಡೆಯಬಹುದು’ ಎಂದು ಹೇಳಿದ್ದು, ಅ.24 ರವರೆಗೆ ನಿರಂತರವಾಗಿ ಕರೆ ಮಾಡಿ ಒತ್ತಡ ಹೂಡಿದ್ದಾರೆ.
ಅ.25ರಂದು ಮತ್ತೊಮ್ಮೆ ಕರೆ ಮಾಡಿ ₹65 ಲಕ್ಷ ಹಣ ನೀಡುವಂತೆ ಒತ್ತಡ ಹಾಕಿದ್ದಾರೆ. ಆತಂಕಗೊಂಡ ಶಂಕರಪ್ಪ ಹಂತ ಹಂತವಾಗಿ ಸೈಬರ್ ಕಳ್ಳರು ತಿಳಿಸಿದ ಖಾತೆಗೆ ₹65,00,057 ಹಣ ವರ್ಗಾವಣೆ ಮಾಡಿದ್ದಾರೆ.ಇದನ್ನು ಓದಿ –ಮಂಡ್ಯದಲ್ಲಿ ಅಕ್ರಮ ಸಂಬಂಧಕ್ಕೆ ಯುವಕನ ಬರ್ಬರ ಕೊಲೆ
ಇದರಿಂದ ತೃಪ್ತಿ ಪಡದ ವಂಚಕರು ಮತ್ತೆ ₹50 ಲಕ್ಷ ಬೇಡಿಕೆ ಇಡುತ್ತಿದ್ದಂತೆ, ಶಂಕರಪ್ಪ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿದಾಗ ಇದು ವಂಚನೆ ಎಂಬುದು ತಿಳಿದುಬಂದಿದೆ. ತಕ್ಷಣವೇ ಅವರು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು