ಐಪಿಎಲ್ 20-20ಯ 47ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ, ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ಗಳ ಜಯಭೇರಿ ಬಾರಿಸಿತು.
ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದಿಂದ ಓಪನಿಂಗ್ ಬ್ಯಾಟ್ಸ್ಮನ್ಗಳಾಗಿ ಫೀಲ್ಡಿಗಿಳಿದ ಶುಭಮನ್ ಗಿಲ್ ಹಾಗೂ ನಿತೀಶ್ ರಾಣಾ ಅವರ ಜೋಡಿಯಾಟದ ಆರಂಭ ಆಕರ್ಷಕವಾಗಿತ್ತು. ಆದರೆ ತಂಡ ಪಂದ್ಯದಲ್ಲಿ ತಂಡ ಪರಾಜಯಗೊಳ್ಳಲೇಬೇಕಾಯಿತು. ಗಿಲ್ ಕೇವಲ 26 ರನ್ಗಳಿಗೆ ಕರ್ಣ ಶರ್ಮಾ ಅವರ ಬೌಲಿಂಗ್ಗೆ ಬೋಲ್ಡ್ ಆದರು. ರಾಣಾ ಅವರು ಪಂದ್ಯದಲ್ಲಿ ತಂಡ ಗೆಲುವಿನ ಹೊಸ್ತಿಲನ್ನು ತುಳಿಯುವಲ್ಲಿ ಸಾಕಷ್ಟು ಶ್ರಮ ವಹಿಸಿದರೂ ಅವರ ಪ್ರಯತ್ನ ಸಫಲವಾಗಲಿಲ್ಲ. ರಾಣಾ 61 ಎಸೆತಗಳಿಗೆ 87 ರನ್ ಗಳಿಸಿದರು. ನಂತರದ ಬ್ಯಾಟ್ಸ್ಮನ್ಗಳ ಆಟ ಅಷ್ಟೊಂದು ಉತ್ಸಾಹದಾಯಕವಾಗಿರಲಿಲ್ಲ. ಕೆಕೆಆರ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಕೆಕೆಆರ್ ನೀಡಿದ ಗುರಿಗೆ ಪ್ರತಿಯಾಗಿ ಸಿಎಸ್ಕೆ ತಂಡದಿಂದ ಎಸ್. ವ್ಯಾಟ್ಸನ್ ಹಾಗೂ ಆರ್. ಗಾಯಕ್ವಾಡ್ ಅವರು ಫೀಲ್ಡಿಗೆ ಬಂದರು. ವ್ಯಾಟ್ಸನ್ 19 ಎಸೆತಗಳಿಗೆ 14 ರನ್ ಗಳಿಸಿದರೆ, ಗಾಯಕ್ವಾಡ್ 53 ಎಸೆತಗಳಿಗೆ 72 ರನ್ ಮೊತ್ತವನ್ನು ತಂಡಕ್ಕೆ ನೀಡಿದರು. ನಂತರ ಬಂದ ಅಂಬಾಟಿ ರಾಯುಡು ಗಾಯಕ್ವಾಡ್ ಅವರೊಡನೆ ಉತ್ತಮ ಸಹಕಾರ ಪ್ರಯತ್ನ ಸಫಲವಾಯಿತು. ರಾಯುಡು 20 ಎಸೆತಗಳಿಗೆ 38 ರನ್ ಗಳಿಸಿದರು. ಸಿಎಸ್ಕೆ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಪಂದ್ಯದ ಜಯಮಾಲೆಯನ್ನು ತನ್ನದಾಗಿಸಿಜೊಂಡಿತು.
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More
ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)… Read More
ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More
This website uses cookies.
Leave a Comment