February 21, 2026

Newsnap Kannada

The World at your finger tips!

karona

ಬೆಂಗಳೂರಿನಲ್ಲಿ ಮದುವೆ ಸಿದ್ದತೆ ಮಾಡಿಕೊಂಡ ಯುವಕ ಕೊರೋನಾ ಗೆ ಬಲಿ

Spread the love

ಮುಂದಿನ ತಿಂಗಳು ಮದುವೆ ಸಿದ್ದತೆ ಮಾಡಿಕೊಂಡಿದ್ದ 28 ವರ್ಷದ ಯುವಕನೊಬ್ಬ ಕೊರೋನಾಗೆ ಬಲಿಯಾಗಿದ್ದಾನೆ.

ಎ. ಜಿ ಸಾಗರ್ ಎ.ಜಿ (28) ಕೊರೊನಾಗೆ ಬಲಿಯಾದ ಯುವಕ. ಬೆಂಗಳೂರಿನ ನಾಗರಭಾವಿ‌ ನಿವಾಸಿಯಾದ ಈತನಿಗೆ ಸಕಾಲಕ್ಕೆ ಐಸಿಯು ಬೆಡ್ ಮತ್ತು ಆಕ್ಸಿಜನ್ ಸಿಗದೆ ನರಳಾಡಿ ಪ್ರಾಣಬಿಟ್ಟಿದ್ದಾನೆ.

ಟೆಸ್ಕೊ ಖಾಸಗಿ ಕಂಪನಿಯಲ್ಲಿ ಐಸಿ ರೋಲ್ ಆಗಿ ಸಾಗರ್ ಕಾರ್ಯನಿರ್ವಹಿಸುತ್ತಿದ್ದ.

ಕಳೆದ 2 ತಿಂಗಳ ಹಿಂದೆ ಸಾಗರ್ ಮದುವೆ ಬಗ್ಗೆ ಮಾತುಕತೆ ಕೂಡ ಆಗಿತ್ತು. ನಿಶ್ಚತಾರ್ಥ ಮಾಡದೆ ಕೇವಲ ಸರಳ ಮದುವೆಗೆ ಯೋಜನೆ ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಸಾಗರ್​ಗೆ ಕೊರೊನಾಗೆ ಬಲಿಯಾಗಿದ್ದಾನೆ.

ಏಪ್ರಿಲ್ 12 ರಂದು ನಾಗರಬಾವಿಯ ಮೆಕ್ಲೂ ಲ್ಯಾಬ್​ನಲ್ಲಿ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಬಳಿಕ ಯುಗಾದಿ ಹಬ್ಬದ ನಂತರ ಚಳಿ, ಜ್ವರ ಕಾಣಿಸಿಕೊಂಡಿದೆ ಮತ್ತೆ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ನಡೆಸಿದ ವೇಳೆ ಕೊರೊನಾ‌ ಸೋಂಕು ದೃಢಪಟ್ಟಿದೆ.

ಹಬ್ಬ ಕಳೆದ ಒಂದು ವಾರದ ಬಳಿಕ ಮಧ್ಯ ರಾತ್ರಿ ಸುಸ್ತು ಮತ್ತು ಬೇಧಿ ಪ್ರಾರಂಭವಾಯಿತು. ಗ್ಲೂಕೋಸ್ ಹಾಕಿಸಿಕೊಳ್ಳೋಕೆ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಸಿಟಿ ಸ್ಕ್ಯಾನಿಂಗ್ ಮಾಡಿಸಿದಾಗ ನ್ಯುಮೋನಿಯಾ ಇದೆ. ತುಂಬಾ ಸೀರಿಯಸ್ ಆಗಿದೆ ಎಂದು ವೈದ್ಯರು ಹೇಳಿದರ. ಅಲ್ಲೆಲ್ಲೂ ಐಸಿಯು ಬೆಡ್ ಸಿಕ್ಕಿಲ್ಲ. ಆದರೆ ವಿಧಿಯಾಟ ಸಾಗರ್ ಕೊರೊನಾಗೆ ಬಲಿಯಾಗಿದ್ದಾನೆ.

error: Content is protected !!