Trending

ವರಕೋಡು ಶಾಲೆಯ ಸುಂದರ ಪರಿಸರಿದಲ್ಲಿ ಕೊರೋನಾ ವಾರಿಯಸ್೯ ಗೆ ಸನ್ಮಾನ

ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ, ಮಕ್ಕಳಿಗೆ ಪರಿಸರದ ಮಹತ್ವ, ಪರಿಸರದಿಂದ ಆಗುವ ಬಗ್ಗೆ ಲಾಭಗಳನ್ನು ವಾಸ್ತವವಾಗಿ ‌ತಿಳಿಸಿಕೊಡುವ ಮೈಸೂರು ಸಮೀಪದ ವರಕೊಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಧಕ ವರ್ಗ ಹಾಗೂ ಎಸ್ ಡಿ ಎಂ ಸಿ ಸದಸ್ಯ ಸೇವೆ ಸದಾ ಸ್ಮರಣೀಯ. ‌

ಮಕ್ಕಳು, ಪ್ರಾಣಿಗಳನ್ನು ದತ್ತು ಪಡೆದು ಕೊಳ್ಳುವುದನ್ಮು ನೋಡಿದ್ದೇವೆ ಆದರ ಇದೊಂದು ಶಾಲೆಯಲ್ಲಿ 150 ಮಕ್ಕಳ ಜೊತೆಗೆ ಪರಿಸರ ಪ್ರೇಮಿಗಳು ಶಾಲಾ ಆವರಣದಲ್ಲಿನ‌ 120 ಮರ ಗಳನ್ನು ಮಗುವಿನಂತೆ ನೋಡಿಕೊಂಡು ಪಾಲನೆ, ಪೋಷಣೆ ಮಾಡುತ್ತಾರೆ.

ಇದೊಂದು ಸುಂದರ ಶಾಲೆ. ಶಾಲೆಯ ಸುತ್ತಲೂ ಹಸಿರು ವನ. ಕಣ್ಮನ ತಣಿಸುತ್ತದೆ. ಕಾರಂಜಿ ವನದಲ್ಲಿ ಇರೋ ಬಾಳೆ,ಅಡಿಕೆ,ತೆಂಗು,ಸಪೋಟ ,ಕಿತ್ತಳೆ ,ನಿಂಬೆಹಣ್ಣಿನ ಗಿಡ, ಅತ್ತಿ ಸೇರಿದಂತೆ ಇತರೆ ಗಿಡಗಳು ಶಾಲೆಗೆ ಶೋಭಾಯಮಾನವಾಗಿದೆ.‌

ಕೊರೋನಾ ವಾರಿಯಸ್ ೯ ಗೆ ಸನ್ಮಾನ‌:

ಸಹಿಪ್ರಾಶಾಲೆ ವರಕೋಡು ಶಾಲೆಯ ಸುಂದರ ವಾತಾವರಣದಲ್ಲಿ ಎಸ್.ಡಿ.ಎಂ.ಸಿ ತರಬೇತಿ ಕಾರ್ಯಕ್ರಮ ಹಾಗೂ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು.

ವಿಡಿಯೋ ಜರ್ನಲಿಸ್ಟ್ ಆರ್. ಮಧುಸೂದನ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಕೊರೋನಾ ವಾರಿಯರ್ಸ್ ಗೆ ಗಿಡಗಳನ್ನು ಅವರ ಹೆಸರಿನಲ್ಲಿ ದತ್ತು ನೀಡಿ ಗಿಡಕ್ಕೆ ಗೊಬ್ಬರ ನೀರು ಉಣಿಸಿ ಪರಿಸರ ಸಂರಕ್ಷಣೆ ಮಾಡುವಂತೆ ಶಾಲೆಯ ಮುಖ್ಯ ಶಿಕ್ಷಕ ಆರ್.ನರಸಿಂಹಮೂರ್ತಿ ಅರಿವು ಮೂಡಿಸಿದರು.

ಸಮಾಜ ಸೇವಕ ರಾಜಾರಾಂ, ಹಿರಿಯ ಕ್ಯಾಮರ ಮೆನ್ ಆರ್.ಮಧುಸೂದನ್, ತಿ.ನರಸೀಪುರ ಠಾಣೆ ಉಪ ನಿರೀಕ್ಷಕ ಮಂಜು,ಪೋಲಿಸ್ ರವಿ ಕುಮಾರ್ , ಪತ್ರಕರ್ತೆ ನಂದಿನಿ ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕಿ ಪದ್ಮ,ಆಶಾ ಕಾರ್ಯಕರ್ತ ರಾದ ಸುನಂದ, ನೇತ್ರಾವತಿ ರವರಿಗೆ ಕೊರೊನಾ ವಾರಿಯರ್ಸ್ ಎಂದು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕಿ ಮಾರ್ಗರೇಟ್, ಸಹಾಯಕ ಶಿಕ್ಷಕ ಕೆ.ಜೆ.ಕುಮಾರ್ ,ಎಸ್.ಡಿ.ಎಂ ಪಿ ಅಧ್ಯಕ್ಷ ಎಸ್.ಸೋಮಣ್ಣ,ದೀಪು ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಗಿಡ ದತ್ತು ಪಡೆದು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಜವಾಬ್ದಾರಿ ಹೆಚ್ಚಿಸಿ ಇತರೆ ಶಾಲೆಗಳಿಗೆ ಮಾದರಿಯಾಗಿರುವುದು ವರಕೂಡು ಸರ್ಕಾರಿ ಶಾಲೆ.

Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024