Main News

ಭಾರತದಲ್ಲಿ ಉಗ್ರರ ದಾಳಿಯ ಸಂಚು; ಎನ್ಐಎಯ ಮಿಂಚಿನ ಕಾರ್ಯಾಚರಣೆ

ಭಾರತದ ಪಶ್ಚಿಮ ಬಂಗಾಳ, ಬೆಂಗಳೂರು, ಕೇರಳ, ದೆಹಲಿ‌ ಸೇರಿದಂತೆ ಅನೇಕ‌ ನಗರಗಳ ಮೇಲೆ ದಾಳಿ ಸಂಚು ನಡೆಸುತ್ತಿದ್ದ ಅಲ್ ಖೈದಾದ ಉಗ್ರರ ಸಂಚನ್ನು ಎನ್ಐಎ (ರಾಷ್ಟ್ರಿಯ ತನಿಖಾ ದಳ) ಮಿಂಚಿನ ಕಾರ್ಯಾಚರಣೆ ಮೂಲಕ ವಿಫಲಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೯ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಪಾಕಿಸ್ತಾನದಿಂದ ಸೂಚನೆಗಳು ಬರುತ್ತಿದ್ದವು. ಅಲ್ಲದೇ ಉಗ್ರರಿಗೆ ಪಾಕಿಸ್ತಾನದಿಂದ ಹಣ ಹಾಗೂ ಬಾಂಬ್ ತಯಾರಿಸಲು‌ ಬೇಕಾದ ಸಾಮಗ್ರಿ ಎಲ್ಲವನ್ನೂ ಕಳಿಸಲಾಗಿತ್ತು.
ಮುರ್ಷಿದ್‌ ಹಸನ್‌, ಇಯಾಕುಬ್‌ ಬಿಸ್ವಾಸ್‌, ಮೊಸರಫ್‌ ಹೊಸೇನ್‌ ಎಂಬುವರನ್ನು ಕೇರಳದಿಂದ ಹಾಗೂ ನಜ್ಮಸ್‌ ಸಾಕಿಬ್‌, ಅಬು ಸೂಫಿಯಾನ್‌, ಮೈನುಲ್‌ ಮೊಂಡಲ್‌, ಲಿಯು ಹೀನ್‌ ಅಹಮದ್‌, ಅಲ್‌ ಮಾಮುನ್‌ ಕಮಲ್‌ ಮತ್ತು ಅತಿತುರ್‌ ರೆಹಮಾನ್‌ ಎಂಬುವವರು ಬಂಧಿತ ಆರೋಪಿಗಳು. ಕೇರಳದಲ್ಲಿ‌ ಸಿಕ್ಕಿರುವ ಅಪರಾಧಿಗಳೂ ಸಹ‌ ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ. ಆರೋಪಿಗಳಿಂದ ಬಾಂಬ್ ತಯಾರಿಸಲು ಬೇಕಾದ ದಾಖಲೆಗಳು, ನಾಡಪಿಸ್ತೂಲು ಮುಂತಾದವುಗಳನ್ನು ತನಿಖಾದಳ ವಶಪಡಿಸಿಕೊಂಡಿದೆ.

ದಾಳಿಯ ಸಂಚಿನ ಮಾಹಿತಿ ಸಿಕ್ಕಿದ್ದ ಎನ್ಐಎಯು ಕೇರಳ ಹಾಗೂ ಪಶ್ಚಿಮ ಬಂಗಾಳದ ಪೋಲೀಸರ ಸಮನ್ವಯ ಸಾಧಿಸಿ ಈ ಚುರುಕಿನ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದರಿಂದ ದೇಶದಲ್ಲಿ‌ ನಡೆಯಬಹುದಾಗಿದ್ದ ದಾಳಿಗಳನ್ನು ಎನ್ಐಎ ತಡೆದಿದೆ. ಬಂಧಿತರನ್ನು ಬಂಗಾಳದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆಪ್ಟೆಂಬರ್ ‌೨೪ರವರೆಗೆ ಎನ್ಐಎ ಬಂಧನಕ್ಕೆ ಒಪ್ಪಿಸಿದೆ. ಸಧ್ಯ ಎನ್ಐಎ ಅಧಿಕಾರಿಗಳು ಬಿರುಸಿನ ತನಿಖೆ ನಡೆಸುತ್ತಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024