ತೆಲುಗಿನ ಗೀತಗೋವಿಂದಂ ಚಿತ್ರದ ದೃಶ್ಯ ದಿಂದ ಪ್ರಚೋದನೆ ಗೊಂಡ ಯುವಕನೊಬ್ಬ ಯುವತಿಗೆ ಚುಂಬಿಸಿದ ಘಟನೆ ಬಗ್ಗೆ ದೂರು ದಾಖಲಾಗಿದೆ.
ಈ ಘಟನೆ ನಡೆದಿದ್ದ ಬಳ್ಳಾರಿ – ಬೆಂಗಳೂರು ಹೈ ಟೆಕ್ ಬಸ್ ನಲ್ಲಿ. ಯುವತಿ ನೀಡಿದ ದೂರನ್ನು ಸ್ವೀಕರಿಸಿದ ಪೀಣ್ಯ ಪೊಲೀಸರು ಎಫ್ ಐಆರ್ ಹಾಕಿದ್ದಾರೆ.
ಕಳೆದ ರಾತ್ರಿ ಬಳ್ಳಾರಿ ಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ತೆಲುಗಿನ ಗೀತಗೋವಿಂದಂ ಚಿತ್ರದ ಹಾಡಿನ ದೃಶ್ಯ ಪ್ರಸಾರವಾಗುತ್ತಿತ್ತು.
ಈ ಚಿತ್ರದ ಹಾಡಿನಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ನಾಯಕಿ ರಷ್ಮಿಕಾಗೆ ನಾಯಕ ವಿಜಯ್ ದೇವರಕೊಂಡ ಚುಂಬಿಸುವ ದೃಶ್ಯವಿದೆ. ಈ ದೃಶ್ಯ ನೋಡಿದ ಯುವಕ ಪಕ್ಕದಲ್ಲೇ ಕುಳಿತು ನಿದ್ದೆ ಮಾಡುತ್ತಿದ್ದ ಯುವತಿಗೆ ಚುಂಬಿಸಿ ಕಾಮುಕ ಕೀಟಲೆ ಮಾಡಿ ಕೃತ್ಯ ಎಸಗಿದ್ದಾನೆ.
ನಂತರ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯಾಗಿರುವ ಯುವತಿ ಬಸ್ ನಿಂದ ಇಳಿದು , ತನ್ನ ಮೇಲಾದ ದೌರ್ಜನ್ಯ ದ ಪೋಲಿಸರಿಗೆ ದೂರು ನೀಡಿದ್ದಾಳೆ.
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ
- ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ