ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು: ಸಂತ್ರಸ್ತೆ ಯುವತಿ ಯಾಕೆ ದೂರು ಕೊಟ್ಟಿಲ್ಲ ?

Team Newsnap
1 Min Read

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಹಿರಂಗೊಳಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ಕರ್ನಾಟಕ ಕನ್ನಡ ಪರ ಹೋರಾಟಗಾರ ರಿಂದ ಕಬ್ಬನ್ ಪೇಟೆ ಪೋಲಿಸರಿಗೆ ದೂರು ನೀಡಿದ್ದಾರೆ.‌

ದೂರುದಾರ ಕೃಷ್ಣ, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಬ್ಲಾಕ್ ಮೇಲ್ ಮಾಡಲಾಗಿದೆ. ಇದೊಂದು ಎಡಿಟೆಡ್ ಕಾಪಿ ಎಂದು ದೂರಿನಲ್ಲಿ
ಹೇಳಿದ್ದಾರೆ.

ದಿನೇಶ್ ಕಲ್ಲಹಳ್ಳಿ , ರಮೇಶ್ ವಿರುದ್ದ ದೂರು ನೀಡುವ ಅಗತ್ಯವೇ ಇಲ್ಲ. ಲೈಂಗಿಕವಾಗಿ ಸುಖಪಟ್ಟಿರುವ ಯುವತಿಯನ್ನು ಯಾರೂ ಬಲವಂತ ಮಾಡಿಲ್ಲ ಎಂಬುದು ಸಿಡಿಯಿಂದಲೇ ಗೊತ್ತಾಗುತ್ತದೆ. ಇದೊಂದು ಸಹಮತದ ಸೆಕ್ಸ್ ಎಂದು ಹೇಳಬಹುದು. ಒಂದು ವೇಳೆ ಆ ಯುವತಿ ಶೋಷಣೆಗೆ ಒಳಗಾಗಿದ್ದರೆ ಆಕೆಯೇ ಧೈರ್ಯವಾಗಿ ಮುಂದೆ ಬಂದು ದೂರು ನೀಡಬಹುದಿತ್ತು. ಯಾಕೆ ಆಕೆ ಹೊರಗೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ದಿನೇಶ್ ಕಲ್ಲಹಳ್ಳಿ ಒಂದು ಷಡ್ಯಂತ್ರ ರೂಪಿಸಿದ್ದಾರೆ. ಈ ಸಿಡಿ ಚಿತ್ರೀಕರಣ ಹೇಗೆ ಆಯಿತು? ಎಲ್ಲಿಂದ ಅಪ್ ಲೋಡ್ ಆಯ್ತು? ಈ ಕುತಂತ್ರದ ಹಿಂದೆ ಯಾರಿದ್ದಾರೆ? ಆ ಯುವತಿಯ ಪಾತ್ರ ಏನ? ಸಂತ್ರಸ್ತೆ ಯಾಕೆ ದೂರು ಕೊಟ್ಟಿಲ್ಲ. ದಿನೇಶ್ ನೀಡಿದ ದೂರಿಗೆ ಮಹತ್ವ ಇದೆಯೇ ? ಅಸಲಿ ಕಥೆಯೇ ಬೇರೆಯಾಗಿದೆ. ಈ ಕುರಿತಂತೆ ಸಮಗ್ರವಾಗಿ ಪೋಲಿಸರು ತನಿಖೆ ಮಾಡಲು ದಿನೇಶ್ ಕಲ್ಲಹಳ್ಳಿ ವಿರುದ್ದ ಪ್ರಕರಣ ದಾಖಲಿಸಿಕೊಂಡು, ಬಂಧಿಸಿ ತನಿಖೆ ಮಾಡುವಂತೆ ಕೃಷ್ಣ ಒತ್ತಾಯಿಸಿದ್ದಾರೆ.

Share This Article
Leave a comment