ಹಾಸ್ಯ ನಟ ರಾಜುತಾಳಿಕೋಟೆ ಮೇಲೆ ತೀವ್ರತರ ಹಲ್ಲೆ ನಡೆದಿದೆ. ಪಿಸ್ತೂಲು ಹಣೆಗಿಟ್ಟು ಹಲ್ಲೆ ಮಾಡಿದ್ದಾರೆ ಎಂದೂ ದೂರಲಾಗಿದೆ.
ಸಂಬಂಧಿಕರಿಂದಲೇ ಈ ಹಲ್ಲೆ ನಡೆದಿದೆ. ವಿಜಯಪುರದ ಯೋಗಾಪುರ ಆಶ್ರಯ ಕಾಲೋನಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಕೌಟುಂಬಿಕ ಸಮಸ್ಯೆ ಬಗೆಹರಿಸುವ ವೇಳೆ ಈ ಹಲ್ಲೆ ನಡೆದಿದೆ ಎಂದು ತಾಳಿಕೋಟೆ ಕುಟುಂಬದ ಮೂಲಗಳು ಹೇಳಿವೆ.
ಗಾಯಗೊಂಡಿರುವ ತಾಳಿ ಕೋಟೆಯನ್ನು ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಹಲವಾರು ಕನ್ನಡ ಚಿತ್ರಗಳಲ್ಲಿ ತಾಳಿಕೋಟೆ ನಟಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ “ರಾಜಾರಾಣಿ” ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಲವು ಜೋಡಿಗಳಲ್ಲಿ ರಾಜು ತಾಳಿಕೋಟೆ ಮತ್ತು ಅವರ ಇಬ್ಬರು ಪತ್ನಿಯ ಜೋಡಿಯೂ ಇದ್ದು, ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ