Categories: Main News

ಬನ್ನಿ ಕಟ್ಟೋಣ ಹೊಸ ನಾಡೊಂದನ್ನು…

ನಾನು ಚಿಗುರೆಯಂತೆ ಓಡಬಲ್ಲೆ,
ಆದರೆ ಅವಕಾಶಗಳಿಲ್ಲ,

ನಾನು ಕೋಗಿಲೆಯಂತೆ ಹಾಡಬಲ್ಲೆ,
ಆದರೆ ಕೇಳುವವರಿಲ್ಲ,

ನಾನು ನವಿಲಿನಂತೆ ನರ್ತಿಸಬಲ್ಲೆ,
ಆದರೆ ನೋಡುವವರಿಲ್ಲ,

ನಾನು ಅಳಿಲಿನಂತೆ ಸೇವೆ ಸಲ್ಲಿಸಬಲ್ಲೆ,
ಆದರೆ ಪಡೆಯುವವರಿಲ್ಲ,

ನಾನು ನಾಯಿಯಂತೆ ನಿಯತ್ತಾಗಿರಬಲ್ಲೆ,
ಆದರೆ ಗಮನಿಸುವವರಿಲ್ಲ,

ನಾನು ಸಿಂಹದಂತೆ ನಾಡಿನ ರಾಜನಾಗಬಲ್ಲೆ,
ಆದರೆ ಆರಿಸುವವರಿಲ್ಲ,

ನಾನು ಎರೆಹುಳುವಿನಂತೆ ಪರಿಸರ ಪ್ರೇಮಿ,
ಆದರೆ ಪ್ರೀತಿಸುವವರಿಲ್ಲ,

ನಾನು ಜೇಡನಂತೆ ಬಲೆ ಎಣೆಯಬಲ್ಲೆ,
ಆದರೆ ಪ್ರೋತ್ಸಾಹಿಸುವವರಿಲ್ಲ,

ನಾನು ಗೀಜಗದಂತೆ ಗೂಡು ಕಟ್ಟಬಲ್ಲೆ,
ಆದರೆ ಸಂತೋಷಿಸುವವರಿಲ್ಲ,

ನಾನು ಹುಲಿಯಂತೆ ಹೋರಾಡಬಲ್ಲೆ,
ಆದರೆ ವೇದಿಕೆ ಕಲ್ಪಿಸುವವರಿಲ್ಲ,

ನನಗೂ ಆನೆಯಂತ ಶಕ್ತಿ ಇದೆ,
ಆದರೆ ಉಪಯೋಗಿಸಿಕೊಳ್ಳುವವರಿಲ್ಲ,

ನನಗೂ ನರಿಯ ಚಾಣಕ್ಷತೆ ಇದೆ,
ಆದರೆ ಗುರುತಿಸುವವರಿಲ್ಲ,

ನನಗೂ ಹಂಸ ಪಕ್ಷಿಯ ನಡೆಯಿದೆ,
ಆದರೆ ನೋಡುವವರಿಲ್ಲ,

ನನಗೂ ಹದ್ದಿನ ಕಣ್ಣಿನಷ್ಟು ತೀಕ್ಷ್ಣ ನೋಟವಿದೆ,
ಆದರೆ ಕಾಣುವವರಿಲ್ಲ,

ನನಗೂ ಹಸುವಿನ ಮುಗ್ಧತೆ ಇದೆ,
ಆದರೆ ಗಮನಿಸುವವರಿಲ್ಲ,

ನನಗೂ ಮೀನಿನ ಚಲನೆಯಿದೆ,
ಆದರೆ ಅರ್ಥಮಾಡಿಕೊಳ್ಳುವವರಿಲ್ಲ,

ನನಗೂ ಆಮೆಯಷ್ಟು ಆಯಸ್ಸಿದೆ,
ಆದರೆ ಪ್ರಯೋಜನವಿಲ್ಲ,

ನಾನು ನಿಮ್ಮಂತೆ ಬರೆಯಬಲ್ಲೆ,
ಆದರೆ ಓದುಗರಿಗೆ ತಲುಪಿಸುವವರಿಲ್ಲ,

ಈ ರೀತಿಯಲ್ಲಿ ಅನೇಕರಿಗೆ ಕೊರಗಿದೆ,

ಬನ್ನಿ ಗೆಳೆಯರೆ ಈಗಲಾದರೂ ನಾವು ಎಚ್ಚೆತ್ತುಕೊಳ್ಳೋಣ,

ಅವಕಾಶ ವಂಚಿತರಿಗೆ ವೇದಿಕೆ ಕಲ್ಪಿಸೋಣ,

ಇದು ಸಾಧ್ಯವಿರುವುದು ಮಾನವೀಯ ಮೌಲ್ಯಗಳ ಪುನರುತ್ಥಾನದಿಂದ ಮಾತ್ರ.

ನಾಗರಿಕ ಸಮಾಜದ ನೈತಿಕ ಮೌಲ್ಯಗಳನ್ನು ಉಳಿಸುವುದರಿಂದ ಮಾತ್ರ,

ಬನ್ನಿ ಕಟ್ಟೋಣ ಹೊಸ ನಾಡೊಂದನ್ನು…

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024