ರಾಜ್ಯ ಬಜೆಟ್ ಮಂಡನೆ : ಮಹಿಳೆಯರ ಅಭ್ಯುದಯಕ್ಕೆ ಹತ್ತಾರು ಯೋಜನೆಗಳ ಪ್ರಕಟಿಸಿದ ಸಿಎಂ
March 8, 2021
ರಾಜ್ಯದ 2021-22 ನೇ ಸಾಲಿನ ಬಜೆಟ್ ಅನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಂಡನೆ ಮಾಡಿದರು.
ಹೊಸ ಹೊಸ ಘೋಷಣೆಗಳು ಏನಿವೆ ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ
ಬಜೆಟ್ ಘೋಷಣೆಗಳು:
ಮಹಿಳೆಯರಿಗಾಗಿ ಮತ್ತು ಮಕ್ಕಳ ಆರೈಕೆಗೆ ನೆರವಾಗಲು ಬೆಂಗಳೂರು ಮತ್ತು ಇತರೆ ಕಡೆ ಇರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರವಾಗಿ ಉನ್ನತೀಕರಣ. ಇದರಿಂದ ಉದ್ಯೋಗ ಸೃಷ್ಟಿ.
ಸಣ್ಣ ಉದ್ಯಮ ನಡೆಸುವ ಮಹಿಳೆಯರಿಗೆ ಆಹಾರ ಸುರಕ್ಷತೆ ಬ್ರ್ಯಾಂಡಿಂಗ್ ಮತ್ತಿತರ ತಾಂತ್ರಿಕ ನೆರವು.
ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ವಾರ್ಷಿಕ ಮೇಳ.
ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಪಾಸ್: 30 ಕೋಟಿ ರು ಮೀಸಲು.
ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ 1700 ಸಿಸಿಟಿವಿ ಕ್ಯಾಮರಾ ಅಳವಡಿಕೆ, ಇ-ಬೀಟ್ ವ್ಯವಸ್ಥೆ
ಬೆಂಗಳೂರು ಮಿಷನ್ 2022- ಬೆಂಗಳೂರು ನವಚೈತನ್ಯ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಮೈಸೂರು ಲ್ಯಾಂಪ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶವನ್ನು ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಎಕ್ಸ್ಪೀರಿಯನ್ಸ್ ಬೆಂಗಳೂರು ಕೇಂದ್ರವಾಗಿ ಪರಿವರ್ತನೆ.
ಬೈಯ್ಯಪ್ಪನಹಳ್ಳಿಯಲ್ಲಿರುವ ಎನ್ಜಿಇಎಫ್ಗೆ ಏರಿದ 105 ಎಕರೆ ಜಮೀನಿನಲ್ಲಿ ಜನರಿಗೆ ಅರಣ್ಯದ ಅನುಭವ ನೀಡುವ ವೃಕ್ಷೋದ್ಯಾನ ಆರಂಭ. ಇಲ್ಲಿರುವ ಕಾರ್ಖಾನೆಯ ಕಟ್ಟಡಗಳನ್ನು ನಗರದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಕೇಗಾರಿಕಾ ವೈಭವವಣ್ನು ಸಾರುವಂತೆ ಮರುಬಳಕೆ ಮಾಡಲಾಗುತ್ತದೆ.
ಮಹಿಳೆಯರಿಗಾಗಿ ಮತ್ತು ಮಕ್ಕಳ ಆರೈಕೆಗೆ ನೆರವಾಗಲು ಬೆಂಗಳೂರು ಮತ್ತು ಇತರೆ ಕಡೆ ಇರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರವಾಗಿ ಉನ್ನತೀಕರಣ. ಇದರಿಂದ ಉದ್ಯೋಗ ಸೃಷ್ಟಿ.
ಬೆಂಗಳೂರು ನವಚೈತನ್ಯ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಮೈಸೂರು ಲ್ಯಾಂಪ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶವನ್ನ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಎಕ್ಸ್ಪೀರಿಯನ್ಸ್ ಬೆಂಗಳೂರು ಕೇಂದ್ರವಾಗಿ ಪರಿವರ್ತನೆ.
ಬೈಯ್ಯಪ್ಪನಹಳ್ಳಿಯಲ್ಲಿರುವ ಎನ್ಜಿಇಎಫ್ಗೆ ಏರಿದ 105 ಎಕರೆ ಜಮೀನಿನಲ್ಲಿ ಜನರಿಗೆ ಅರಣ್ಯದ ಅನುಭವ ನೀಡುವ ವೃಕ್ಷೋದ್ಯಾನ ಆರಂಭ. ಇಲ್ಲಿರುವ ಕಾರ್ಖಾನೆಯ ಕಟ್ಟಡಗಳನ್ನು ನಗರದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಕೇಗಾರಿಕಾ ವೈಭವವನ್ನು ಸಾರುವಂತೆ ಮರುಬಳಕೆ ಮಾಡಲಾಗುತ್ತದೆ.
Leave a Comment