ಸಿಎಂ ಬೊಮ್ಮಾಯಿ ಮುಂದೆ ಕೇಂದ್ರ ಸಚಿವರಾಗುತ್ತಾರೆ ಎಂದು ಸಚಿವ ಮುರುಗೇಶ್ ನಿರಾಣಿ
ಕೂತೂಹಲದ ಸಂಗತಿಯೊಂದನ್ನು ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆಯುತ್ತಿರುವ ಚನ್ನಮ್ಮ ಸಭಾಭವನ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಈ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.
ನಿರಾಣಿ ಉವಾಚ ?
ಕಾರ್ಯಕ್ರಮದ ಜನರನ್ನುದ್ದೇಶಿಸಿ ಮಾತನಾಡಿದ ಸಚಿವ ನಿರಾಣಿ ಅಂದೇ ನಾನು ಹೇಳಿದ್ದೆ, ನೀವು ಓಟ್ ಹಾಕೋದು ಮುಂದಿನ ಮುಖ್ಯಮಂತ್ರಿಗೆ ಅಂತ. ಅದರ ಪ್ರಕಾರ ಇಂದು ಬಸವರಾಜಣ್ಣ ಸಿಎಂ ಆಗಿದ್ದಾರೆ.ನಾನು ಬಸಣ್ಣ ಮೂವತ್ತು ವರ್ಷದ ಸ್ನೇಹಿತರು.ಒಂದೇ ಕಾಲೇಜಿನಲ್ಲಿ ಓದಿದವರು. ಹಾಗಾಗಿ ನಾವು ಅಣ್ಣ ತಮ್ಮ ಇದ್ದ ಹಾಗೆ ಎಂದರು.
ಇಂದು ಹೇಳ್ತಿದ್ದೇನೆ ಕೇಳಿ ಈ ಪೂರ್ತಿ ಅವಧಿಯಲ್ಲಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಬಸವರಾಜಣ್ಣನೇ ಪೂರ್ತಿ ಅವಧಿಗೆ ಸಿಎಂ ಆಗಿ ಮುಂದುವರೆಯುತ್ತಾರೆ.ಯಾರೇ ಏನೇ ಹೇಳಿದರೂ ಕಿವಿಯಲ್ಲಿ ಹಾಕೋಬೇಡಿ ಮುಂದೆ ಅವರ ತಂದೆಯ ಹಾಗೆ ಕೇಂದ್ರದಲ್ಲೂ ಬೊಮ್ಮಾಯಿ ಅಣ್ಣ ಮಂತ್ರಿ ಆಗೇ ಆಗ್ತಾರೆ ಎಂದು ನಿರಾಣಿ ಹೇಳಿ ಆಶ್ಚರದ ಸಂಗತಿಯನ್ನು ಹೊರ ಹಾಕಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು