October 17, 2024

Newsnap Kannada

The World at your finger tips!

WhatsApp Image 2024 10 07 at 1.05.25 PM

ಪಶ್ಚಿಮಘಟ್ಟದ ಹೆಬ್ರಿಯಲ್ಲಿ ಮೇಘಸ್ಫೋಟ: ಓರ್ವ ಬಲಿ

Spread the love

ಉಡುಪಿ: ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ಉಡುಪಿಯ ಪಶ್ಚಿಮ ಘಟ್ಟದ ಹೆಬ್ರಿ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಹಠಾತ್ ಜಲಪ್ರವಾಹದಲ್ಲಿ ಓರ್ವ ವೃದ್ಧ ಸಾವನ್ನಪ್ಪಿದ್ದಾರೆ.

ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ಬಲ್ಲಾಡಿಯ ಈಶ್ವರನಗರ ಸಮೀಪ ಬಮ್ಮಗುಂಡಿ ಹೊಳೆ ಉಕ್ಕಿ ಹರಿಯತೊಡಗಿ, ಮನೆಗಳು ಮತ್ತು ಕೃಷಿ ಜಮೀನಿಗೆ ನೀರು ನುಗ್ಗಿ ಗಂಭೀರ ಹಾನಿ ಉಂಟಾಗಿದೆ.

ಈ ಪ್ರವಾಹದಲ್ಲಿ 85 ವರ್ಷದ ಚಂದ್ರಾಗೌಡ್ತಿ ಅವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿ –ಕಲ್ಯಾಣ ಕರ್ನಾಟಕಕ್ಕೆ 5800 ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘಸ್ಫೋಟದಿಂದ ಈ ಭೀಕರ ಪ್ರವಾಹ ಉಂಟಾಗಿದೆ. ಸ್ಥಳೀಯರು ತಕ್ಷಣ ಕಾರ್ಯಚರಣೆ ಕೈಗೊಂಡಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಘಟನೆಯ ಕುರಿತ ಇನ್ನಷ್ಟು ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.

Copyright © All rights reserved Newsnap | Newsever by AF themes.
error: Content is protected !!