February 23, 2026

Newsnap Kannada

The World at your finger tips!

c s puttaraju 5899

Have done PhD in contesting election - Will win by margin of 25 thousand votes : CS Puttaraju ಚುನಾವಣೆ ಎದುರಿಸುವಲ್ಲಿ ಪಿಎಚ್ ಡಿ ಮಾಡಿರುವೆ - 25 ಸಾವಿರ ಮತಗಳ ಅಂತರದ ಗೆಲುವು : ಸಿ ಎಸ್ ಪುಟ್ಟರಾಜು

ಕೃಷಿ ಹೊಂಡಕ್ಕೆ ಬಿದ್ದು ಮಕ್ಕಳ ಸಾವು ಘಟನೆ : ಶಾಸಕ ಪುಟ್ಟರಾಜುರಿಂದ ತಲಾ 20 ಸಾವಿರ ರು. ಪರಿಹಾರ

Spread the love

ಏಪ್ರಿಲ್ 8 ರಂದು ಪಾಂಡವಪುರ ತಾಲೂಕಿನ ಬಳ್ಳೇ ಅತ್ತಿಗುಪ್ಪೆ ಗ್ರಾಮದಲ್ಲಿ
ಕೃಷಿ ಹೊಂಡದಲ್ಲಿ‌ ಈಜಲು ಹೋಗಿ‌ ಮೂವರು ಮಕ್ಕಳ ಧಾರುಣ ಸಾವು ಕಂಡ ಘಟನೆಗೆ ಸಂಬಂಧಿಸಿದಂತೆ ಮೇಲುಕೋಟೆ ಶಾಸಕ ಸಿ. ಎಸ್. ಪುಟ್ಟರಾಜು ಬಾಲಕರ ಕುಟುಂಬಗಳಿಗೆ ವೈಯಕ್ತಿಕ ಪರಿಹಾರ ನೀಡಿದರು.

ashoka

ಶಾಸಕ ಪುಟ್ಟರಾಜು ಆದೇಶದಂತೆ ಶಾಸಕರ ಪರವಾಗಿ ಗ್ರಾಮಕ್ಕೆ ಭೇಟಿ‌ ನೀಡಿದ ಜಿ ಪಂ ಸಾಮಾಜಿಕ ನ್ಯಾಯ ಸ್ಥಾಯಿ‌ ಸಮಿತಿ ಅಧ್ಯಕ್ಷ ಸಿ .ಅಶೋಕ್,ಸೋಮವಾರ ಬಳ್ಳೇಅತ್ತಿಗುಪ್ಪೆ ಗ್ರಾಮಕ್ಕೆ ಭೇಟಿ ನೀಡಿ ಮಹದೇವಪ್ಪ ಎಂಬುವರ ಇಬ್ಬರು ಮಕ್ಕಳಾದ ಚಂದನ್, ಕಾರ್ತಿಕ್ ಹಾಗೂ ಮಲ್ಲಿಕಾರ್ಜುನರ ಪುತ್ರ ರೀತೇಶ್ ರ ಕುಟುಂಬಗಳಿಗೆ ಸಾಂತ್ವನ ಹೇಳಿ ಪ್ರತಿ ಕುಟುಂಬಕ್ಕೆ ತಲಾ 20 ಸಾವಿರ ರು ಗಳ‌ ಪರಿಹಾರ ವಿತರಿಸಿದರು.
ಈ ವೇಳೆ ಮಾತನಾಡಿದ ಜಿ ಪಂ ಸಾಮಾಜಿಕ ನ್ಯಾಯ ಸ್ಥಾಯಿ‌ ಸಮಿತಿ ಅಧ್ಯಕ್ಷ ಸಿ.ಅಶೋಕ್, ಘಟನೆ ನಡೆದ ನಂತರ ಎರಡು ದಿನಗಳ ಕಾಲ‌ವು ಶಾಸಕ ಪುಟ್ಟರಾಜು ಅವರು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಸರ್ಕಾರದಿಂದ ದೊರೆಯಬಹುದಾದ ಪರಿಹಾರದ ಮೊತ್ತ ವಿಳಂಬ ಆಗುವ ಸಾಧ್ಯತೆ ಇದೆ. ಹೀಗಾಗಿ ವೈಯಕ್ತಿಕ ವಾಗಿ ಶಾಸಕರೇ 20 ಸಾವಿರ ನೀಡಿದ್ದಾರೆ ಎಂದರು.

ಸರ್ಕಾರದ ಪರಿಹಾರ ಕುರಿತಂತೆ ಶಾಸಕರು, ಜಿಲ್ಲಾಧಿಕಾರಿಗಳ ಮೂಲಕ ಶಿಫಾರಸ್ಸು ಮಾಡಿಸಿ ಪರಿಹಾರ ಕೊಡಿಸುವ ಪ್ರಯತ್ನವನ್ನು ಪ್ರಾಮಾಣಿಕ ವಾಗಿ ಮಾಡಲಿದ್ದಾರೆಂದರು.

error: Content is protected !!