Main News

ಸಿದ್ದು ಗುಣಗಾನ ಮಾಡಿದ ಚಲುವರಾಯಸ್ವಾಮಿ : ಜೆಡಿಎಸ್ ಗೆ ಟಾಂಗ್

ನಾಟಕ, ಥಳಕು ಇಲ್ಲದ, ಬಿಚ್ಚು ಮನಸ್ಸಿನ ರಾಜಕಾರಣಿ ಸಿದ್ದರಾಮಯ್ಯ‌ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಮನಸಾರೆ ಬಣ್ಣನೆ ಮಾಡಿದರು.

ಮಂಡ್ಯದಲ್ಲಿ ಡಾ ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಇಂದಿನ ರಾಜಕಾರಣದಲ್ಲಿ ನಾಟಕ, ಗಿಮಿಕ್, ಥಳಕು ಕಲಿತರೆ ಉತ್ತಮ ರಾಜಕಾರಣಿ ಆಗಬಹುದು.ಆದರೆ, ಸಿದ್ದರಾಮಯ್ಯ, ನಾವು ಅದನ್ನ ಕಲಿಯಲಿಲ್ಲ.
ಜನರೂ ಕೂಡ ಅದನ್ನ ಕಲಿಸಲಿಲ್ಲ.
ರಾಜಕೀಯವಾಗಿ ಆ ರೀತಿ ನಡೆದುಕೊಳ್ಳಲು ನಮಗೆ ಇಂದಿಗೂ ಸಾಧ್ಯವಿಲ್ಲ ಎಂದರು.

ರಾಜಕಾರಣದಲ್ಲಿ ಜಿಲ್ಲೆಯ ಜನ ದುಡುಕಿನ ನಿರ್ಧಾರ ಮಾಡಬಾರದು.
ಅದರಿಂದ ಬೇರೆಯವರಿಗಿಂತ, ನಮಗೇ ಹೆಚ್ಚಿನ ತೊಂದರೆ ಆಗುತ್ತೆ. ಅದನ್ನು ಈಗ ನಾವು ನೋಡ್ತಿದ್ದೇವೆ.ಅದಕ್ಕಾಗಿ ಯೋಚನೆ ಮಾಡಿ, ವಿವೇಚನೆಯಿಂದ ನಿರ್ಧಾರ ಮಾಡಿ ಎಂದು ಪರೋಕ್ಷವಾಗಿ ಜೆಡಿಎಸ್ ಗೆ ಬೆಂಬಲ ನೀಡುವುದಕ್ಕೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಜಾತಿವಾದಿಯಲ್ಲ:

ಸಿದ್ದರಾಮಯ್ಯನವರನ್ನು ಜಾತಿವಾದಿ ಅಂತಾ ಬಿಂಬಿಸ್ತಾರೆ. ಅವರು ಜಾತಿವಾದಿಯಲ್ಲ, ಎಲ್ಲಾ ವರ್ಗದ ಬಡವರ ಪರ. ಅವರು 5 ಸಿಎಂ ಆಗಿ ನೀಡಿದ ಕೊಡುಗೆಗಳೇ ಸಾಕ್ಷಿ.
ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕವಾಗಿ ವಿಷಯ ಕರಗತ ಮಾಡಿಕೊಂಡಿದ್ದಾರೆ.
ಆರ್ಥಿಕ ತಜ್ಞ ಅಲ್ಲದಿದ್ದರೂ, ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಇದೆ.

ನೇರ ನಡೆ, ನುಡಿಗೆ ಸಿದ್ದರಾಮಯ್ಯ ಪ್ರಸಿದ್ಧಿಯಾಗಿದ್ದಾರೆ. ಅದನ್ನು ಅರಗಿಸಿಕೊಳ್ಳದವರಿಂದ ಸಿದ್ದರಾಮಯ್ಯನವರ ಬಗ್ಗೆ ಟೀಕೆ ಕೇಳಿ ಬರುತ್ತವೆ ಎಂದರು.

Team Newsnap
Leave a Comment
Share
Published by
Team Newsnap

Recent Posts

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More

May 3, 2024

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024